ಮಾತು ಮುಗಿದಿಲ್ಲ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 240

₹ 240.00




Year of Publication: 2022
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಲೇಖಕರ ಒಡನಾಟದ ಬಗೆಗೆ ಬರೆದಿರುವ ಲೇಖನಗಳ ಸಂಗ್ರಹ ಮಾತು ಮುಗಿದಿಲ್ಲ. ಲೇಖಕರ ಮಾತಿನಲ್ಲಿ ಅವರು ಹೇಳಿರುವಂತೆ, ಮುಗಿಯದ ಓದಿಗೆ ಮುಗಿತಾಯ ಇಲ್ಲವೇ ಇಲ್ಲ. ಮುಗಿವು ಮುಗಿಲಿನಷ್ಟು ವ್ಯಾಪಕ, ಶಾಶ್ವತ; ವಾಯುವಿನಷ್ಟು ಅಪಾರ, ಅಪರಿಮಿತ. ಈ ಮುಗಿಲು ಗಾಳಿಗಳನ್ನು ಹಿಡಿಯಲಾಗದು, ಬಿಡಲಾಗದು, ನಮಗೆ ತಿಳಿದ ಆಕಾರದಲ್ಲಿ ಕಡೆಯಲಾಗದು, ಪಡೆಯಲಾಗದು. ಆದರೂ ಅವುಗಳ ಸಂಗ ಬಿಡಲಾಗದು. ಲೇಖಕರಾದವರಿಗಂತೂ ಇವು ಬಿಟ್ಟೆನೆಂದರೂ ಬಿಡದ ಮಾಯೆಗಳೇ. ಮುಗಿವಿನ ಮಾಯ ಬಹುವರ್ಣಿಯ, ಮೋಹಕ, ಆಕರ್ಷಕ. ಮುಗಿವು ಅಮಿತ ಆಕರ್ಷಣೆಯ, ನವನವೀನ ಅರ್ಥಗಳನ್ನು ಸೂಸುವ ಅದ್ಭುತ ದರ್ಶನ ಲೋಕ. ನಮ್ಮ ಓದು, ಚಿಂತನ, ಮನನಗಳ ಜೊತೆಗೆ ಬೆಳೆಯುತ್ತಲೇ, ಚಿಗುರುತ್ತ ಹೋಗುವ ವಿಶಿಷ್ಟ ಗುಣ ಇವುಗಳಿಗೆ ಸಾಧಿಸಿರುತ್ತದೆ. ಹೀಗಾಗಿ, ನಮ್ಮ ಬರವಣಿಗೆಗೆ ಹೊಸ ಹೊಸ ಹೊಗರು ಮೂಡಲು ಸಾಧ್ಯವಾಗುತ್ತದೆ. ಆದ್ದರಿಂದ ಯಾವುದಕ್ಕೂ ಕೊನೆ ಎಂಬುದು ಇರದು, ಇರಬಾರದು. ಮಾತು, ಬರಹಗಳ ಲೋಕಕ್ಕೆ ಸಂದ ನಾನು ಕಳೆದ ವರ್ಷ ಪ್ರಕಟವಾದ ನನ್ನ 'ಹೊತ್ತು ಹೊತ್ತಿಗೆ' ಕೃತಿಯಲ್ಲಿ ಕೆಲವು ಹೊತ್ತಿಗೆಗಳ ಬಗ್ಗೆ ಬರೆದ ಲೇಖನಗಳನ್ನು ಸಂಚಯಿಸಿದ್ದೆ. ಈ ಸಲದ ಕೃತಿ 'ಮುಗಿಯದ ಮಾತು'. ಇದು ನನ್ನ ಇಂಥ ಬರಹಗಳ ೧೧ನೆಯ ಸಂಗ್ರಹ ಮಾತು ಮುಗಿದಿಲ್ಲ ಎಂಬುದಾಗಿ ಹೇಳಿದ್ದಾರೆ.

ಕೃತಿಯ ಪರಿವಿಡಿಯಲ್ಲಿ, ಆಡಿದಷ್ಟೂ ಮುಗಿಯದ ಬೇಂದ್ರೆ, ಹಿಂದೀ ಮೋಹಿನಿಯೂ ಮಾಂತ್ರಿಕ ಜೋಶಿ ಗುರುನಾಥರೂ, ಮೋಹನ ಮುರಲಿ ಮಿಡಿದ ಬೆಟಗೇರಿ ಕೃಷ್ಣಶರ್ಮ, ಕನ್ನಡ ಕಸ್ತೂರಿ ಪಾ.ವೆಂ. ಆಚಾರ್‍ಯ, ದ್ಯಾವಾ ಪೃಥಿವಿಗೆ ಸೇತು ವಿನಾಯಕ ಕೃಷ್ಣ ಗೋಕಾಕ, ಮನ್ವಂತರದ ಜಿ.ಬಿ.ಜೋಶಿ, ‘ಓಂ ನಮೋ’ ದೇಸಾಯಿ ಶಾಂತಿನಾಥಾಯ ಹೀಗೆ ಅನೇಕ ಶೀರ್ಷಿಕೆಗಳ ಬರಹಗಳಿವೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books