ಮೇಧ-೦೧೭

Author : ಧನಪಾಲ ನಾಗರಾಜಪ್ಪ

Pages 88

₹ 80.00




Year of Publication: 2018
Published by: ಧನಪಾಲ ನಾಗರಾಜಪ್ಪ
Address: ಹೊಸಕೋಟೆ, ಬೆಂಗಳೂರು.
Phone: 562122 6362567802, 7892546523

Synopsys

ಸಲೀಂ ತೆಲುಗು ಭಾಷೆಯ ಸೂಕ್ಷ್ಮ ಸಂವೇದಿ ಲೇಖಕ. ಸಲೀಂ ತೆಲುಗಿನಲ್ಲಿ ಪ್ರಕಟಿಸಿದ ‘ಮೇಧ 017’ಎಂಬ ಮಕ್ಕಳ ಕಾದಂಬರಿಯನ್ನು ಧನಪಾಲ ನಾಗರಾಜಪ್ಪ ಅವರು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಬ್ರಹ್ಮ ಮತ್ತು ತಮಸ್ವಿನಿ ದಂಪತಿಗಳಿಗೆ ಸ್ಕರಣೆ ಮತ್ತು ಶೃತಿ ಎನ್ನುವ ಇಬ್ಬರು ಮಕ್ಕಳು, ಅಪ್ಪ ಸದಾ ತನ್ನ ಸಂಶೋಧನೆಯಲ್ಲಿ ಮಗ್ನನಾಗಿದ್ದರೆ ಇವರು ವೀಡಿಯೋ ಗೇಮ್ಸ್, ಕಂಪ್ಯೂಟರ್ ಗೇಮ್ಸ್‌ಗೆ ದಾಸರಾಗುತ್ತಾರೆ. ಮೊದಮೊದಲು ತಾವು ಆಡುತ್ತಿದ್ದ ಆಟಗಳು ಆಸಕ್ತಿಕರವಾಗಿ ಅನಿಸಿದರೂ ಸಮಯ ಕಳೆದಂತೆ ಆ ಆಟಗಳು ಅವರಿಗೆ ಇಷ್ಟವಾಗುವುದಿಲ್ಲ. ಶೃತಿಯ ಕೋರಿಕೆಯಂತೆ ಬ್ರಹ್ಮ ಅವರಿಗೆ ವರ್ಚುವಲ್ ಗೇಮ್ ತಯಾರಿಸಿಕೊಡುತ್ತಾನೆ. ಅದರಿಂದ ಆ ಮಕ್ಕಳಿಗೆ ತಾವಿರುವ ಕಡೆಯಲ್ಲೇ ಹಿಮ ಪರ್ವತಾರೋಹಣದ ಅನುಭೂತಿ, ಕಾಡಿನಲ್ಲಿ ಬೇಟೆಯಾಡುವ ಅನುಭೂತಿ ಆಗುತ್ತದೆ.

ಸ್ವಲ್ಪ ಸಮಯದ ನಂತರ ಆ ಮಕ್ಕಳಿಗೆ ವರ್ಚುವಲ್ ಗೇಮ್ ಕೂಡ ಬೇಸರ ಅನಿಸಿದಾಗ ಬ್ರಹ್ಮ ಆರ್ಜೀ (ರಿಯಲ್ ಗೇಮ್) ಅನ್ನು ತಯಾರಿಸಿ ಕೊಡುತ್ತಾನೆ. ರಿಯಲ್ ಗೇಮ್ಸ್ ಆಡುವಾಗ ಆಗುವ ಸಣ್ಣ ಆಚಾತುರದಿಂದ ಆರ್ಜೀ ಕಂಪ್ಯೂಟರ್‌ನಲ್ಲಿ ಎಂತಹ ಬದಲಾವಣೆಗಳಾದವು? ಅದರಿಂದ ಸ್ಮರಣೆ ಮತ್ತು ಶೃತಿಯೊಂದಿಗೆ ಅವರ ಇಡೀ ಕುಟುಂಬ ಏನೆಲ್ಲಾ ಸಂಕಷ್ಟಕ್ಕೆ ಸಿಲುಕಿತು? ಕೊನೆಗೆ ಅದರಿಂದ ಅವರು ಹೇಗೆ ಪಾರಾದರು ಎಂಬ ಕಥಾ ಹಂದರವನ್ನುಳ್ಳ ಕಾದಂಬರಿ “ಮೇಧ-೦೧೭”.

About the Author

ಧನಪಾಲ ನಾಗರಾಜಪ್ಪ
(20 June 1987)

ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ...

READ MORE

Related Books