ಮೀಸಲು ಕವಿತೆಗಳು

Author : ಎಚ್.ಎಸ್. ಶಿವಪ್ರಕಾಶ್

Pages 108

₹ 115.00




Year of Publication: 2017
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕಾಲ-ದೇಶಗಳ ಗಡಿ ಮೀರಿದ ತಮ್ಮ ವಿಸ್ತಾರವಾದ ಓದು-ಅನುಭವಗಳಿಂದ, ಲೌಕಿಕ-ಅಲೌಕಿಕಗಳ ನಡುವೆ ಸಲೀಸು ಸುತ್ತಿ ಸುಳಿವ ಸೂಕ್ಷ್ಮ ಸಂವೇದನೆಯ ಒಳನೋಟ-ತಿಳಿನೋಟಗಳಿಂದ ಕನ್ನಡ ಕಾವ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ತಮ್ಮದೇ ಮೀಸಲು ನಿನದವನ್ನು ಕಡೆದು ಕಾಣಿಸಿದ ಎಚ್.ಎಸ್. ಶಿವಪ್ರಕಾಶ ಅವರ ಈ ಮೀಸಲು ಕವಿತೆಗಳು ತಮ್ಮ ಅನಾದಿ ನಾದ-ಲಯಗಳ ಹೊಸ ಹೊಳಪಿನಿಂದ ಹೊಸ ಯುಗದ ಹೊಸ ಬಗೆಯ ಶಿವ-ಶಕ್ತಿ ಯೋಗವನ್ನು ಸಾಧ್ಯವಾಗಿಸುತ್ತಿವೆ. 'ಶಿವಲಿಂಗವೆಂಬ ತಿಳಿನೀರಿನಲ್ಲಿ' 'ನಾನೆಂಬ ಹಮ್ಮು ಸೋಕದೆ' ಕವಿಯೊಡನೆ ನಾವೂ 'ನೀನಾಗಿ ಅನುವಾದವಾಗುವ' ಅನುಭಾವದ ನೆಲೆಯನ್ನು ಕಾಣಬಹುದಾದ ಎತ್ತರದ ಮುಗಿಲ ಅಲೆಯನೇರುವ ಗರಿಯಾಗುತ್ತೇವೆ. ಅಂತಹ ಅರಿವಿಗೆ ಅಭಿಜ್ಞಾನವಾಗಿ ಇಲ್ಲಿನ ಕವಿತೆಗಳು ಮೌನದಲ್ಲೇ ಮಾತಾಗುತ್ತವೆ. ವರ್ತಮಾನದ ತಲ್ಲಣಗಳಿಗೆ ತೀವ್ರವಾಗಿ ಸ್ಪಂದಿಸುತ್ತಲೇ ಪ್ರೀತಿ ನೀತಿ ಭಕ್ತಿ ರಕ್ತಿ ವಿರಕ್ತಿಗಳ ಸುಗಮ ಸಾಂಗತ್ಯದ ಈ ಕವಿತೆಗಳನ್ನು ಕೆತ್ತಿದ ಶಿವಪ್ರಕಾಶರಿಗೆ ಪ್ರೀತಿಯ ಅಭಿನಂದನೆಗಳು. - ಬಿ.ಆರ್. ವೆಂಕಟರಮಣ ಐತಾಳ

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Related Books