ಮೇಘದೂತ: ಕಾಳಿದಾಸ-ಬೇಂದ್ರೆ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 56

₹ 40.00




Year of Publication: 1989
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

”ಮೇಘದೂತ’ ಕಾಳಿದಾಸ ಮತ್ತು ಬೇಂದ್ರೆ- ಅಭಿನವ ಪ್ರಕಾಶನದ ಸರಸ್ವತಿ ನೆನಪು ಮಾಲಿಕೆಯಲ್ಲಿ ಪ್ರಕಟವಾದ ಕೃತಿ.  ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ಸಂಸ್ಕೃತ, ಹಳಗನ್ನಡ ಮತ್ತು ಆಧುನಿಕ ಕನ್ನಡದ ಅಧ್ಯಯನ ನಡೆಸಿ, ತಮ್ಮ ಕಾವ್ಯದಲ್ಲಿ ಅನೇಕ ಬಗೆಯ ಪ್ರಯೋಗಗಳನ್ನು ಮಾಡಿದ್ದಾರೆ.  ಅಪೂರ್ವ ವಸ್ತುವಿನ್ಯಾಸದ ನಾಟಕಕಾರರಾಗಿ, ಮಕ್ಕಳ ಸಾಹಿತ್ಯವನ್ನು ಬೆಳೆಸಿದ ಹಿರಿಯರಾಗಿ, ವಿದ್ವತ್ ಚಿಂತನೆಯ ವಿಮರ್ಶಕರಾಗಿ, ಅಂತಃಕರಣದ ಮಾತುಗಾರರಾಗಿ, ನಲ್ಮೆಯ ಅಧ್ಯಾಪಕರಾಗಿ, ಅಪರೂಪದ ಸ್ನೇಹಜೀವಿಯಾಗಿ ಪರಿಚಿತರೂ ಆಗಿದ್ದಾರೆ. 

 ಕಾಳಿದಾಸನ ಕಾವ್ಯವನ್ನು ಜೀವಂತವಾಗಿ ಕನ್ನಡಕ್ಕೆ ತಂದ ಬೇಂದ್ರೆಯವರ ಸೃಜನಶೀಲತೆಯ ಬಗ್ಗೆ ಕೆಲವು ಮೌಲಿಕವಾದ ಮಾತುಗಳನ್ನು ಹೇಳುತ್ತಾ, ಕನ್ನಡದಲ್ಲಿ ಮೇಘದೂತ ಮೂಡಿಬಂದ ಅನುವಾದ ಪರಂಪರೆಯನ್ನು ಪರಿಶೀಲಿಸಿದ್ದಾರೆ. ಕಾಳಿದಾಸನ ಋತುಸಂಹಾರವನ್ನು ಕನ್ನಡಕ್ಕೆ ತಂದ ವೆಂಕಟೇಶಮೂರ್ತಿ ಅವರೇ ಈ ತೌಲನಿಕ ಅಧ್ಯಯನವನ್ನು ನಡೆಸಿರುವುದು ಸ್ವಾಗತಾರ್ಹವಾಗಿದೆ. 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books