ಮೇರುಗುರು ಕೈವಾರ ತಾತಯ್ಯ

Author : ವಿಜಯ ಪದ್ಮಶಾಲಿ

Pages 252

₹ 250.00




Year of Publication: 2021
Published by: ಸುಮಾ ಪ್ರಕಾಶನ
Address: ನಂ. 53, 5ನೇ ಟೆಂಪಲ್‌ ರಸ್ತೆ, ಸಿದ್ಧಾಂತಿ ಬ್ಲಾಕ್‌ ಮಲ್ಲೇಶ್ವರಂ, ಬೆಂಗಳೂರು- 560 003
Phone: 8073147961

Synopsys

ಮೇರುಗುರು ಕೈವಾರ ತಾತಯ್ಯ ವಿಜಯ ಪದ್ಮಶಾಲಿ ಅವರ ಕೃತಿಯಾಗಿದೆ. ಕೈವಾರದ ಯೋಗಿನಾರೇಯಣ ಯತೀಂದ್ರರ ಕುರಿತು ಒಂದು ಸಮಗ್ರವಾದ ಚಿತ್ರಣವನ್ನು ನೀಡಲು ಮಹಿಳೆ ಮುಂದಾಗಿರುವುದು ಇದೇ ಮೊದಲು... ಸ್ಥಳೀಯ ಐತಿಹ್ಯಗಳನ್ನು ಕುರಿತು ಒಂಬತ್ತು ಪದ್ಯಗಳನ್ನು ಬರೆದಿದ್ದೀರಿ. ಸರಳ ಸುಂದರವಾಗಿವೆ. ಭಾವಪೂರ್ಣವಾಗಿವೆ. ನೆಲದ ಹಿರಿಮೆ ಗರಿಮೆಗಳನ್ನು ಕಟ್ಟಿಕೊಟ್ಟಿವೆ. ಮುಕ್ತಕದಲ್ಲಿ ಅಪೂರ್ವವಾದಂತಹ ಕ್ರಿಯಾಶೀಲ ಮನೋಭಾವವನ್ನು ವ್ಯಕ್ತಪಡಿಸಿದ್ದೀರಿ..... ನಿಮಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಕಾವ್ಯ ಗಣನೀಯ ಹಾಗೂ ಮನನೀಯ ಕಾವ್ಯವಾಗುತ್ತದೆ. ಕನ್ನಡ ನಾಡಿನಲ್ಲಿ ತನ್ನದೇ ಛಾಪು ಮೂಡಿಸುತ್ತದೆ. ಕವಿತಾಕೃಷ್ಣ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿಜಯ ಪದ್ಮಶಾಲಿ
(03 July 1969)

ಕವಯತ್ರಿ ವಿಜಯ ಪದ್ಮಶಾಲಿ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರಿನವರು. ತಂದೆ ರಂಗಸಂದ್ರಂ ಹನುಮಂತಪ್ಪ ತಾಯಿ ವೆಂಕಟಮ್ಮ.  ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಪುಸ್ತಕಗಳನ್ನು ಓದುವುದು ಅವರ ನೆಚ್ಚಿನ ಹವ್ಯಾಸ. ಕತೆ, ಕವನ, ಲೇಖನ, ಷಟ್ಪದಿ, ಮುಕ್ತಕ, ಚುಟುಕು, ಹನಿಗವನ ಬರೆಯುವುದರಲ್ಲಿ ಆಸಕ್ತಿ ಹೊಂದಿದವರು. ಹದಿನೈದು ವರ್ಷಗಳಿಂದ ಸ್ಥಳೀಯ ಪತ್ರಿಕೆಗಳಿಗೆ ಪದಬಂಧ ರಚನೆಕಾರರು. ’ಭಾವೋಲ್ಲಾಸ’ ಅವರ ಪ್ರಥಮ ಕವನ ಸಂಕಲನ. ಕಾವ್ಯ ಕಲ್ಪವಲ್ಲಿ ಎಂಬುದು ಕಾವ್ಯನಾಮ. ಪ್ರಶಸ್ತಿಗಳು :  ತ್ರಿಕಾಲಜ್ಞಾನಿ ಕೈವಾರ ತಾತಯ್ಯ ರಾಷ್ಟ್ರ ಪ್ರಶಸ್ತಿ ,ಕನ್ನಡ ಸಾಹಿತ್ಯರತ್ನ ರಾಜ್ಯ ಪ್ರಶಸ್ತಿ, ಸಾಹಿತ್ಯ ಸುಮ ಪ್ರಶಸ್ತಿ  ಕೃತಿಗಳು :  ಭಾವೋಲ್ಲಾಸ ಕವನ ಸಂಕಲನ , ...

READ MORE

Related Books