ಮಿಥಿಲೆಯನ್ನಾಳಿದ ಕರ್ನಾಟರು

Author : ಸದಾನಂದ ಕನವಳ್ಳಿ

Pages 180

₹ 100.00




Year of Publication: 2002
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು.

Synopsys

ಮಿಥಿಲೆಯನ್ನಾಳಿದ ಕರ್ನಾಟಕರು- ಪುಸ್ತಕವು ಕ್ರಿ.ಶ. 1097 ಮತ್ತು 1325ರ ಮಧ್ಯೆ ಕರ್ನಾಟಕರು ಆಳಿದ ಮಿಥಿಲೆಯ ರಾಜಕೀಯ, ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪ್ರಮುಖ ಲಕ್ಷಣಗಳಿಗೆ ಪ್ರಾಶಸ್ತ್ಯ ನೀಡುತ್ತದೆ.

ಈ ಕಾಲಘಟ್ಟವು ಮಿಥಿಲೆಯ ಇತಿಹಾಸವನ್ನು ರೂಪಿಸಿತೆಂದು ಪರಿಗಣಿಸಲಾಗಿದೆ. ಏಕೆಂದರೆ, ತಮ್ಮ ಹಿಂದಿನ ಕಾಲಘಟ್ಟದ ಜನಕರಂತೆಯೆ ಕರ್ನಾಟರೂ ಮಿಥಿಲೆಯನ್ನು ಭಾರತದ, ವಿಶೇಷತಃ ಉತ್ತರ ಭಾರತದ ಭಿತ್ತಿಯ ಮೇಲೆ ತಂದವರು. ಇದು ಕರ್ನಾಟರನ್ನು ಕುರಿತು ಪ್ರತ್ಯೇಕವಾಗಿ ಬರೆದ ಮೊದಲ ಕೃತಿ.

ಮುಖ್ಯವಾಗಿ ಕ್ರಿ.ಶ. 1097ವರೆಗಿನ ಮಿಥಿಲಾ ಇತಿಹಾಸದ ಸಂಕ್ಷಿಪ್ತ ಅವಲೋಕನ, ಮಿಥಿಲೆಯ ಕರ್ನಾಟ ಮೂಲ, ನಾನ್ಯದೇವನ ಜೀವನ, ಸಾಧನೆ, ನಾನ್ಯದೇವನ ಉತ್ತರಾಧಿಕಾರಿಗಳು, ಮಿಥಿಲೆಯ ರಾಜಕೀಯ ಇತಿಹಾಸ, ಹರಿಸಿಂಹದೇವನ ಜೀವನ, ಸಾಧನೆಗಳು, ಕ್ರಿ.ಶ. 1325ರವರೆಗಿನ ಮಿಥಿಲೆಯಲ್ಲಿ ಮುಸ್ಲಿಮ ಪ್ರಭುತ್ವ ವಿಸ್ತರಣೆ, ಕರ್ನಾಟರ ಅವನತಿ ಕುರಿತು ವಿವರಿಸಿದ್ದಾರೆ. ಸಿ.ಪಿ.ಎನ್‌. ಸಿನ್ಹಾ ಅವರು ರಚಿಸಿದ ಈ ಕೃತಿಯನ್ನು ಸದಾನಂದ ಕನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಸದಾನಂದ ಕನವಳ್ಳಿ
(18 September 1935 - 03 April 2015)

ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...

READ MORE

Related Books