ಮೋಳಿಗೆ ಮಾರಯ್ಯ ಹಾಗೂ ರಾಣಿ ಮಹಾದೇವಿ ಯವರ ವಚನಗಳು

Author : ರೆ. ಉತ್ತಂಗಿ ಚೆನ್ನಪ್ಪ

Pages 503

₹ 6.00




Year of Publication: 1950
Published by: ವೀರಭದ್ರಪ್ಪ ಹಾಲಬಾವಿ
Address: ನಿವೃತ್ತ ನ್ಯಾಯಾಧೀಶರು, ಕಲಾಮಂದಿರ ಧಾರವಾಡ

Synopsys

ಸಂ.ಶಿ.ಭೂಸನೂರಮಠ ಹಾಗೂ ರೆ. ಉತ್ತಂಗಿ ಚೆನ್ನಪ್ಪನವರು ಸಂಪಾದಿಸಿದ ಕೃತಿ-ಮೋಳಿಗೆ ಮಾರಯ್ಯ ಹಾಗೂ ರಾಣಿ ಮಹಾದೇವಿಯವರ ವಚನಗಳು. ವಚನ ಸಾಹಿತ್ಯದ ವಿಸ್ತಾರ ಅಗಾಧ-ಅಪಾರ. ಪ್ರತಿಯೊಬ್ಬ ಶರಣನೂ ಸಹ ಒಂದೊಂದು ಜ್ಞಾನದ ಆಳ ಕಡಲು. ಬೌದ್ಧಿಕ ಎತ್ತರಕ್ಕೆ ಆಕಾಶವೇ ಮಿತಿ. ಅವರ ವಚನಗಳು ಅನಂತ...ಶಾಶ್ವತ. ಎಲ್ಲ ಕಾಲ-ದೇಶಕ್ಕೂ ಅನ್ವಯಿಸುವಂತಹದ್ದು. ಮೋಳಿಗೆ ಮಾರಯ್ಯ ಹಾಗೂ ರಾಣಿ ಮಹಾದೇವಿಯ ಯವರ ವಚನಗಳನ್ನು ಸಂಶೋಧಿಸಿ ಸಂಪಾದಿಸಲಾಗಿದೆ. ಇಲ್ಲಿಯ ವಚನಗಳ ಶೈಲಿ, ಶಬ್ದ, ವ್ಯಾಕರಣ, ವಿಚಾರಗಳನ್ನೂ ಸಹ ವಿಶ್ಲೇಷಿಸಲಾಗಿದೆ. ಮೋಳಿಗೆ ಮಾರಯ್ಯನ ವಚನಗಳನ್ನು ಈಶ್ವರ-ಜೀವ-ವಿಶ್ವ, ಷಟಸ್ಥಲಗಳು, ಸಂಪೂರ್ಣ ಷಟಸ್ಥಲ, ಅಷ್ಟಾವರಣ, ಅವಿದ್ಯೆ, ವಾಗದ್ವೈತ, ಬೆಡಗಿನ ವಚನಗಳು ಹೀಗೆ ವಿಭಾಗಿಸಿ ವಿಶ್ಲೇಷಿಸಲಾಗಿದೆ. ಅದೇ ರೀತಿ ರಾಣಿ ಮಹಾದೇವಿಯವರ ವಚನಗಳನ್ನು ಸಹ ವರ್ಗೀಕರಿಸಲಾಗಿದೆ. ವಚನ ಸಾಹಿತ್ಯ ಸಂಪಾದಿತ ಕೆಲಸದಲ್ಲಿ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿ ಗಮನ ಸೆಳೆಯುತ್ತದೆ.

About the Author

ರೆ. ಉತ್ತಂಗಿ ಚೆನ್ನಪ್ಪ
(28 October 1881 - 04 August 1962)

ಉತ್ತಂಗಿ ಚೆನ್ನಪ್ಪ ಅವರ ಕಾವ್ಯನಾಮ ತಿರುಳು ಗನ್ನಡದ ತಿರುಕ. ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ.ಎಲ್ ರೈಸ್ ಮೊದಲಾದವರಿಂದ ಕನ್ನಡದಲ್ಲಿ ಕೆಲಸ ಆರಂಭವಾಯಿತು. ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಅದರಲ್ಲೂ ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವ ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಕವಿಯ ಸಂಪೂರ್ಣ ಪರಿಚಯ ಮಾಡಿಕೊಟ್ಟವರಲ್ಲಿ ಪ್ರಮುಖರು ರೆವೆರೆಂಡ್ ಉತ್ತಂಗಿ ಚೆನ್ನಪ್ಪ. ಇವರು ಭಾರತೀಯರು. ಧರ್ಮಪ್ರಚಾರ ಅವರ ವೃತ್ತಿಯಾದರೂ ಪ್ರವೃತ್ತಿಯಿಂದ ಕನ್ನಡದ ಕಟ್ಟಾಳು. ನಾಡಿಗರ ನಾಲಿಗೆಯ ಮೇಲೆ ನೆಲಸಿದ್ದ , ಪಂಡಿತ ಪಾಮರರ ಪ್ರೀತಿಗೆ ...

READ MORE

Related Books