ಮೂಢನಂಬಿಕೆಗಳು ಮತ್ತು ವೈಜ್ಙಾನಿಕ ಮನೋಭಾವ

Author : ಎಚ್‌. ನರಸಿಂಹಯ್ಯ

Pages 50

₹ 32.00




Year of Publication: 2014
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
Address: ಬೆಂಗಳೂರು

Synopsys

ಖ್ಯಾತ ವಿಜ್ಞಾನಿ, ಸಾಹಿತಿ ಮತ್ತು ಬೆಂಗಳೂರು ವಿ.ವಿ. ನಿವೃತ್ತ ಕುಲಪತಿ ಡಾ. ಎಚ್. ನರಸಿಂಹಯ್ಯ ಅವರ ಕೃತಿ-ಮೂಢನಂಬಿಕೆಗಳು ಮತ್ತು ವೈಜ್ಞಾನಿಕ ಮನೋಭಾವ. ನಂಬಿಕೆಗಿಂತ ಮೂಢನಂಭಿಕೆ ಭಿನ್ನ. ಮೌಢ್ಯವನ್ನು ಎಂದಿಗೂ ನಂಬಬಾರದು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಪ್ರತಿಯೊಂದನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ಆ ಮೂಲಕ ಸತ್ಯವನ್ನು ತಿಳಿಯಬೇಕು. ಏಕೆಂದರೆ, ಮನುಷ್ಯನಿಗೆ ವಿಚಾರ ಮಾಡುವ ಶಕ್ತಿ ಇದೆ. ಆದ್ದರಿಂದ, ಮೌಢ್ಯವನ್ನೇ ನಂಬಬಾರದು ಎಂದು ಪ್ರತಿಪಾದಿಸುವ ಕೃತಿ ಇದು. ಈ ಮೂಲಕ ಸಮಾಜದಲ್ಲಿಯ ಮೂಢನಂಬಿಕೆಗಳ ನಿರ್ಮೂಲನಕ್ಕೆ ಪ್ರೇರಣೆಯಾಗುವ ಕೃತಿ ಇದು.

About the Author

ಎಚ್‌. ನರಸಿಂಹಯ್ಯ
(06 June 1920 - 31 January 2005)

ಎಚ್.ನರಸಿಂಹಯ್ಯನವರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಹಿಂದುಳಿದ ಬಡಕುಟುಂಬದಲ್ಲಿ ಜನಿಸಿದ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿಯೇ ಮುಗಿಸಿದರು. 1935ರಲ್ಲಿ ಬೆಂಗಳೂರಿನ ನ್ಯಾಷನಲ್‌ ಹೈಸ್ಕೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಆನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ (ಪ್ರಥಮ) ದರ್ಜೆಯಲ್ಲಿ ಉತ್ತೀರ್ಣರಾದರು. 1946ರಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆಮೇಲೆ ಹನ್ನೆರಡು ವರ್ಷಗಳು ಪ್ರಿನ್ಸಿಪಾಲರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ, ಅವರ ...

READ MORE

Related Books