ಮೂರು ಪಾಲಿ ಸೂತ್ರಗಳು

Author : ಜಿ.ಪಿ. ರಾಜರತ್ನಂ

Pages 95

₹ 1.00




Year of Publication: 1937
Published by: ಶಾಕ್ಯ ಸಾಹಿತ್ಯ ಮಂಟಪ
Address: ಮಲ್ಲೇಶ್ವರಂ, ಬೆಂಗಳೂರು

Synopsys

ದೀಘನಿಕಾಯ ಎಂಬ ಪಾಲಿಗ್ರಂಥದಿಂದ ಆಯ್ದ ಮೂರು ಸೂತ್ರಗಳನ್ನು ಜಿ.ಪಿ. ರಾಜರತ್ನಂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಮೂರೂ ಸೂತ್ರಗಳ ಅನುವಾದಗಳು ಮೊದಲು ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಶ್ರಾಮಣ್ಯ ಫಲ ಸೂತ್ರ, ಅಂಬಷ್ಟ ಸೂತ್ರ ಹಾಗೂ ಸೋಣದಂಡ ಸೂತ್ರಗಳನ್ನು ಅನುವಾದಿಸಲಾಗಿದೆ.

ಮನುಷ್ಯ ಸನ್ಯಾಸಿಯಾಗುವುದರಿಂದ ಫಲವೇನು ಎಂಬುದನ್ನು ಶ್ರಾಮಣ್ಯ ಫಲ ಸೂತ್ರದಲ್ಲಿ, ಧರ್ಮವನ್ನು ವಿವರಿಸುವಾಗ ಜಾತಿವಾದ, ವರ್ಣವಾದ ಹಾಗೂ ಗೋತ್ರವಾದಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಅಂಬಷ್ಟ ಸೂತ್ರ ಹೇಳುತ್ತದೆ. ಸೋಣದಂಡ ಸೂತ್ರದಲ್ಲಿ ಜಾತಿ, ವರ್ಣ ಹಾಗೂ ಮಂತ್ರಗಳಿಗಿಂತ ಶೀಲ ಪ್ರಜ್ಞೆಗಳೇ ಹೆಚ್ಚಿನವು. ಇವುಗಳಿಂದಲೇ ಬ್ರಾಹ್ಮಣ್ಯ ಸಿದ್ದಿಸುತ್ತದೆ ಎಂದು ವಿವರಿಸಲಾಗಿದೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books