ಮೂಡ್ನಾಕೂಡು ನಾಟಕಗಳು

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 224

₹ 140.00




Year of Publication: 2010
Published by: ಸಚಿನ್ ಗ್ರಾಫಿಕ್ಸ್
Address: ನಂ.773, 7ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು- 570004

Synopsys

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಈ ನಾಟಕ ಸಂಕಲನದಲ್ಲಿ ಕೆಂಡ ಮಂಡಲ, ಬಹುರೂಪಿ, ಹಾಗೂ ಬೀದಿನಾಟಕಗಳಾದ ಬಹಿಷ್ಕಾರ, ಅಂಗಭಂಗ ಹಾಗೂ ಅಪಘಾತ ಸಂಕಲನಗೊಂಡಿವೆ. ಈ ಕೃತಿಗೆ ಕೆ. ಮರುಳಸಿದ್ದಪ್ಪ ಅವರ ಬೆನ್ನುಡಿಯ ಬರಹವಿದೆ. ಕೆಂಡಮಂಡಲವನ್ನು ಓದಿದಾಗ ನಾನು ವಿಶೇಷವಾಗಿ ಆಕರ್ಷಿನಾದುದು ವಸ್ತುವಿನ ಹೊಚ್ಚ ಹೊಸತನದಿಂದ. ಸಮಕಾಲೀನ ಭಾರತದ ಜ್ವಲಂತ ಸಮಸ್ಯೆಯಾದ ಜಾತಿ ಮತ್ತು ವರ್ಗ ತಾರತಮ್ಯವನ್ನು ಈ ನಾಟಕದ ಮೂಲಕ ವಿಶ್ಲೇಷಿಸುವ ಚಿನ್ನಸ್ವಾಮಿಯವರ ಗ್ರಹಿಕೆಗಳು ಅನನ್ಯವಾಗಿದೆ. ನಾಟಕದಲ್ಲಿ ಭಾವ ತೀವ್ರತೆಗಿಂತ ಎಚ್ಚರದ ವಿಮರ್ಶೆ ವಿಶ್ಲೇಷಣೆಗಳ ವಾಗ್ವಾದವನ್ನು ಆಶ್ರಯಿಸಿರುವುದರಿಂದ ಕ್ರಿಯೆ ಮಂದಗತಿಯಲ್ಲಿದೆಯಾದರೂ, ಕಥೆ ಕುತೂಹಲಕಾರಿಯಾಗಿ ಹಂತ ಹಂತವಾಗಿ ಹರಡಿಕೊಳ್ಳುತ್ತದೆ. ಎಲ್ಲ ಜಾತಿಯ ಬಡವರೂ ಸಮಾನರೆಂಬ ಸರಳವಾದ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುವವರ ಎದುರಿನಲ್ಲಿ ಈ ನಾಟಕವು ತೆರೆದು ತೋರಿಸುತ್ತಿರುವ ಕಟು ಸತ್ಯ ಕ್ರೂರವಾಗಿದೆಯಾದರೂ ನಿಜಸ್ಥಿತಿಗೆ ಸಮೀಪವಾಗಿದೆ ಎನ್ನುತ್ತಾರೆ ಮರುಳಸಿದ್ದಪ್ಪ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books