ಮುಗಿದ ಶಾಲೆ ತೆರೆದ ಜೀವನ

Author : ಜಿಡ್ಡು ಕೃಷ್ಣಮೂರ್ತಿ

Pages 216

₹ 210.00




Year of Publication: 2022
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

ವಿದ್ಯಾರ್ಥಿಗಳ ಜತೆ ಜೆ. ಕೃಷ್ಣಮೂರ್ತಿಯವರು 1954ರ ಜನವರಿ ತಿಂಗಳಿನಲ್ಲಿ ವಾರಣಾಸಿಯಲ್ಲಿ ನಡೆಸಿದ ಸಂವಾದಗಳ ಹಾಗೂ ನೀಡಿದ ಉಪನ್ಯಾಸಗಳ ಅಧಿಕೃತ ವರದಿಗಳನ್ನು ಈ ಕೃತಿಯು ಒಳಗೊಂಡಿದೆ. ಗಂಗಾ ಹಾಗೂ ವರುಣಾ ನದಿಗಳ ಸಂಗಮದಲ್ಲಿ ಜೆಕೆ ಸ್ಥಾಪಿಸಿದ ರಾಜ್‌ಘಾಟ್ ಸ್ಕೂಲ್‌ನಲ್ಲಿ ನೀಡಿದ ಹದಿನೈದು ಉಪನ್ಯಾಸಗಳು ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಮೂರು ಉಪನ್ಯಾಸಗಳು ಇದರಲ್ಲಿ ಅಡಕಗೊಂಡಿವೆ. ಪಕ್ಷ 1930ರಿಂದ 1980ರ ತನಕ ಭಾರತಕ್ಕೆ ನೀಡಿದ ವಾರ್ಷಿಕ ಭೇಟಿಗಳ ಸಂದರ್ಭದಲ್ಲಿ ಕೃಷ್ಣಮೂರ್ತಿಯವರು ಕೆಲವು ವಾರಗಳ ಕಾಲ ವಸತಿ ಶಾಲೆಯಲ್ಲಿದ್ದು ಕೊಂಡು ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಪಾಲಕರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ತಪ್ಪದೆ ಉಪನ್ಯಾಸ ನೀಡುತ್ತಿದ್ದರು. ಅವರು ಉಪನ್ಯಾಸಗಳನ್ನು ನೀಡಿದರು, ಪ್ರಶ್ನೆಗಳಿಗೆ ಉತ್ತರಕೊಟ್ಟರು, ಶೋತೃಗಳನ್ನು ಮುಕ್ತ ಸಂವಾದದಲ್ಲಿ ತೊಡಗಿಸಿದರು ಮತ್ತು ಜನರನ್ನು ವೈಯಕ್ತಿಕವಾಗಿ ಹಾಗೂ ಸಣ್ಣ ಗುಂಪುಗಳಲ್ಲಿ ಭೇಟಿಯಾದರು. ಈ ಎಲ್ಲ ಭೇಟಿಗಳಲ್ಲಿ ಶಿಕ್ಷಣವನ್ನು ಜೀವನದಿಂದ ಬೇರ್ಪಡಿಸಬಾರದು ಮತ್ತು ಹಿರಿಯ ಕಿರಿಯರೆನ್ನದೆ ಎಲ್ಲರೂ ಬಾಹ್ಯ ಪ್ರಪಂಚ ಹಾಗೂ ಮಾನವನ ಪ್ರಜ್ಞೆಯ ಅಂತರಂಗವನ್ನು ಅರಿಯಲು ಅದು ನೆರವಾಗಬೇಕು ಎಂಬುದನ್ನು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಜಿಡ್ಡು ಕೃಷ್ಣಮೂರ್ತಿ
(11 May 1895)

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ...

READ MORE

Related Books