ಮುಗಿಲ ಮಾತು

Author : ಬನ್ನಂಜೆ ಗೋವಿಂದಾಚಾರ್ಯ

Pages 152

₹ 130.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100/ 26617755

Synopsys

ಹಿರಿಯ ವಿದ್ವಾಂಸರೂ, ಸಾಹಿತಿಯೂ ಆದ ಬನ್ನಂಜೆ ಗೋವಿಂದಾಚಾರ್ಯರ ಕೃತಿ ’ಮುಗಿಲ ಮಾತು’.

ಐದು ಆಕಾಶವಾಣಿ ನಾಟಕಗಳ ಸಂಕಲನವನ್ನು ಒಟ್ಟುಗೂಡಿಸಿ ಈ ಕೃತಿಯಲ್ಲಿರಿಸಿದ್ದಾರೆ.

ಜಡೆ ಹೆಣೆದಳು ಪಾಂಚಾಲಿ, ನಡುವಿನವನ ಬಿಡುಗಡೆ, ಅಗ್ನಿಮಿತ್ರನಿಗೊಲಿದ ಮಾಲವಿಕೆ, ಕಾಳಿದಾಸನ ಆತ್ಮಕಥೆ, ಆನಂದತೀರ್ಥ ಎಂಬ ಐದು ನಾಟಕಗಳನ್ನು ಈ ಕೃತಿ ಒಳಗೊಂಡಿದೆ.

ಜಡೆ ಹೆಣೆದಳು ಪಾಂಚಾಲಿ ಭಟ್ಟ ನಾರಾಯಣನ ಸಂಸ್ಕೃತನಾಟಕ ವೇಣೀಸಂಹಾರದ ಸಂಕ್ಷಿಪ್ತ ಕನ್ನಡ ರೂಪಾಂತರವಾಗಿದೆ.  ಈ ನಾಟಕದಲ್ಲಿ ಸೂತ್ರಧಾರ, ಭೀಮ, ದ್ರೌಪದಿ, ಕಂಚುಕಿ, ಸಖಿ , ಭಾನುಮತಿ, ದುರ್ಯೋಧನ, ದೂತಿ, ದುಶ್ಯಲೆ, ಅಶ್ವತ್ಥಾಮ, ಸೂತ, ಕರ್ಣ, ಸುಂದರಕ, ಧೃತರಾಷ್ಟ್ರ, ಗಾಂಧಾರಿ, ಸಂಜಯ, ಪಾಂಚಾಲಕ, ಯುಧಿಷ್ಠಿರ, ರಾಕ್ಷಸ : ಚಾರ್ವಾಕ , ಕೃಷ್ಣ, ಅರ್ಜುನ ಮೊದಲಾದ ಪಾತ್ರಗಳು ಈ ನಾಟಕದಲ್ಲಿದೆ.

About the Author

ಬನ್ನಂಜೆ ಗೋವಿಂದಾಚಾರ್ಯ

 ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ  ಜಿಲ್ಲೆಯ ಅಂಬಲಪಾಡಿಯಲ್ಲಿ  1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...

READ MORE

Related Books