ಮುಳ್ಳೂರು ನಾಗರಾಜರ ಸಮಗ್ರ ಸಾಹಿತ್ಯದ ನಾಲ್ಕನೇಯ ಸಂಪುಟದಲ್ಲಿ ಅವರ ಆತ್ಮಕಥೆ ‘ಮಾಮರದ ಮೇಲೊಂದು ಕೋಗಿಲೆ ಭಾಗ-1, ಭಾಗ-2’ ಹಾಗೂ ‘ದಲಿತ ಚಳವಳಿ’ ಕುರಿತ ಬರೆಹಗಳನ್ನು ಒಳಗೊಂಡಿದೆ.
ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯ ಅನುಭವಗಳು, ಕಥನ ಹಾಗೂ ಸಾಹಿತ್ಯಕ ಬರೆಹಗಳು ಇಲ್ಲಿವೆ. ತಾವು ಸಾಗಿ ಬಂದ ಹಾದಿಯಲ್ಲಿ ಹೊಕ್ಕಿದ ಅಡೆತಡೆಗಳನ್ನು ತೊಡೆದುಕೊಂಡ ತಮ್ಮ ಜೀವನ ಯಾನವು ಇಲ್ಲಿ ಅಭಿವ್ಯಕ್ತವಾಗಿದೆ. ಮುಳ್ಳೂರು ನಾಗರಾಜರ ಕೃತಿಗಳನ್ನು ಅಪ್ಪಗೆರೆ ಸೋಮಶೇಖರ್ ಸಂಪಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ.
©2024 Book Brahma Private Limited.