ತುಳುವರ ಮುಂಬಯಿ ವಲಸೆ

Author : ವಿಶ್ವನಾಥ ಕಾರ್ನಾಡ್

Pages 484

₹ 350.00




Year of Publication: 2019
Published by: ಕನ್ನಡ ವಿಭಾಗ
Address: ಮುಂಬಯಿ ವಿಶ್ವವಿದ್ಯಾಲಯ, ವಿದ್ಯಾನಗರಿ, ಮುಂಬೈ-400098

Synopsys

ಮುಂಬೈ ಒಂದು ಸಂಕೀರ್ಣ ನಗರ. ಮೂಲ ನಿವಾಸಿಗಳಿಗಿಂತ ವಲಸೆ ಬಂದವರೇ ಹೆಚ್ಮು ಜನ. ಮುಂಬೈ ತುಳು ಹಾಗೂ ಕನ್ನಡಿಗರ ಸಾಹಸ ಸಾಧನೆಗೆ ಎರಡು ಶತಮಾನಗಳ ಸುದೀರ್ಘ ಇತಿಹಾಸವಿದೆ. ಈ ಮಹಾನಗರಕ್ಕೆ ವಲಸೆ ಬಂದ ತುಳುವರು ನಂತರ ನೆಲೆ ನಿಂತ ಬಗೆ, ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ, ತೋರಿದ ಪ್ರತಿಭೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಲೇಖಕ ಡಾ. ವಿಶ್ವನಾಥ ಕಾರ್ನಾಡ್ ಅವರು ನೀಡಿರುವ ಕೃತಿಯೇ-ತುಳುವರ ಮುಂಬೈ ವಲಸೆ.

ಈ ಕೃತಿಯು ಲೇಖಕರ ಸಂಶೋಧನಾ ಮಹಾಪ್ರಬಂಧ. ಇದರಲ್ಲಿ ಒಟ್ಟು 11 ಅಧ್ಯಾಯಗಳಿವೆ. ಮುಂಬೈಗೆ ತುಳುವರ ವಲಸೆಗೆ ಕಾರಣ, ಅವರು ಬೆಳೆದು ಬಂದ ಬಗೆ, ಸಾಧನೆಗಳು, ಮುಂಬೈ ಆಕರ್ಷಣೆ-ಕಾರಣಗಳ ಪರಿಶೀಲನೆ, ವಲಸೆಯ ಕಾಲಘಟ್ಟ ನಿರ್ಣಯ, ತುಳುವರ ಆರ್ಥಿಕ ಅಭ್ಯುದಯ, ಸಾಂಘಿಕ ಜೀವನ, ಸ್ವಜಾತಿ ಸಂಸ್ಥೆಗಳು, ಸಾಂಸ್ಕೃತಿಕ ಜೀವನ, ಸಾಮಾಜಿಕ ಶೈಕ್ಷಣಿಕ ಜೀವನ, ತುಳುವರಿಗೆ ಮುಂಬೈ ಶಾಶ್ವತ ನೆಲೆಯಾಗಬಹುದೆ? ಇತ್ಯಾದಿ ಅಧ್ಯಾಯಗಳು ಮುಂಬೈಯಲ್ಲಿ ನೆಲೆ ನಿಂತ ತುಳುವರ ಸಮಗ್ರ ಜೀವನವನ್ನು ಕಟ್ಟಿಕೊಡುತ್ತದೆ.

About the Author

ವಿಶ್ವನಾಥ ಕಾರ್ನಾಡ್

ತುಳುನಾಡಿನ ಮುಲ್ಕಿ ಸಮೀಪದ ಕಾರ್ನಾಡಿನಲ್ಲಿ ಹುಟ್ಟಿದ  ಡಾ. ಕೆ. ವಿಶ್ವನಾಥ ಕಾರ್ನಾಡರು (1940) ಓದಿಗೆ ಮತ್ತು ಉದ್ಯೋಗಕ್ಕಾಗಿ ಮುಂಬೈ ನಗರ ಸೇರಿದರು.  ಕನ್ನಡ, ಇಂಗ್ಲಿಷ್ ಮತ್ತು ಇತಿಹಾಸ ಮೂರು ವಿಷಯಗಳಲ್ಲಿ ಎಂ.ಎ. ಮಾಡಿ, ಎಲ್. ಎಲ್.ಬಿ, ಬಿ.ಎಡ್.ಪದವಿ ಹಾಗೂ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಮುಂಬೈಯ ಮಹರ್ಷಿ ದಯಾನಂದ ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಮೂವತ್ತೈದು ವರ್ಷಗಳ ಕಾಲ ದುಡಿದು ನಿವೃತ್ತರಾಗಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ, ಎಂ.ಫಿಲ್ ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. 'ತುಳುವರ ಮುಂಬಯಿ ವಲಸೆ-ಸಾಂಸ್ಕೃತಿಕ ಅಧ್ಯಯನ' ಎಂಬ ಸಂಶೋಧನಾ ಕೃತಿಯೂ ಸೇರಿದಂತೆ ಒಂಬತ್ತು ಕಥಾ ...

READ MORE

Related Books