ಮುನ್ನುಡಿ ಮುಕುರ

Author : ಸಿ. ನಾಗಣ್ಣ

Pages 180

₹ 180.00




Year of Publication: 2020
Published by: ಯುಕ್ತ ಪ್ರಕಾಶನ
Address: ನಂ.2109, ಮದ್ವಚಾರ್ ರಸ್ತೆ, ಕೆ.ಆರ್. ಮೊಹಲ್ಲಾ, ಮೈಸೂರು- 570004

Synopsys

‘ಮುನ್ನುಡಿ ಮುಕುರ’ ಡಾ. ಸಿ.ನಾಗಣ್ಣ ಅವರು ವಿವಿಧ ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿಗಳ ಸಂಕಲನ. ಈ ಕೃತಿಗೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಮುನ್ನುಡಿ ವಿಮರ್ಶೆಯಲ್ಲ, ಕೈದೀವಿಗೆ. ಅನೇಕರಿಗೆ ಅದು ದಾರಿದೀಪವಾಗಿ ಮುನ್ನಡೆಸಿಕೊಂಡು ಹೋಗಿದೆ. ಹೀಗೆಯೇ ಇರಬೇಕು ಎಂಬುದ ವಿಮರ್ಶೆ, ಹೀಗೆದ್ದರೆ ಚೆನ್ನ ಎಂಬುದು ಮುನ್ನುಡಿ. ಇದನ್ನು ಅರಿತೇ ನಾಗಣ್ಣ ಹಳಬರಿಗೆ ಮಾರ್ಗದರ್ಶಕರಾಗುತ್ತಾರೆ, ಹೊಸಪೀಳಿಗೆಯ ಲೇಖಕರನ್ನು ಕೈ ಹಿಡಿದು ಸಾಹಿತ್ಯಲೋಕಕ್ಕೆ ಸ್ವಾಗತಿಸುತ್ತಾರೆ. ಹೆಚ್ಚು ಓದಿಕೊಂಡಿದ್ದರೂ ಅಹಮ್ಮಿಕೆಯನ್ನು ಬೆಳೆಸಿಕೊಳ್ಳದೆ ಸಾತ್ವಿಕರಾಗಿದ್ದಾರೆ. ಹಾಗಾಗಿ ಉದಾರವಾದಿಯೆನಿಸಿಕೊಳ್ಳುತ್ತಾರೆ. ಸ್ವತಃ ಕವಿಯಾಗಿ, ಅನುವಾದಕರಾಗಿ, ಅಂಕಣಕಾರರಾಗಿ ಹೆಸರು ಮಾಡಿರುವ ಶ್ರೀಯುತರ ಕೊಡುಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎನ್ನುತ್ತಾರೆ.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books