ಮುಸ್ಲಿಂ ಮಹಿಳೆಯರು ಮತ್ತು ತಲಾಖ್

Author : ಸಾರಾ ಅಬೂಬಕ್ಕರ್

Pages 171

₹ 180.00




Year of Publication: 2016
Published by: ಚಂದ್ರಗಿರಿ ಪ್ರಕಾಶನ
Address: # 2-20-ಏ 630/2, ಸೂಕ್ಷ್ಮ ತರಂಗ ನಿಲಯ ರಸ್ತೆ, ಮಂಗಳೂರು-575006
Phone: 08242455292

Synopsys

ಸೈಯದ್ ಭಾಯಿ ಎಂಬುವರು ‘ಏಕಪಕ್ಷೀಯ ತಲಾಖ್ ವಿರುದ್ಧ ನಮ್ಮ ಯುದ್ಧ’ ಎಂಬ ಉಪಶೀರ್ಷಿಕೆಯಡಿ ಮೂಲ ಮರಾಠಿಯಲ್ಲಿ ಬರೆದ ವಿಚಾರಪೂರ್ಣ ಬರಹಗಳನ್ನು ಅಂಜಲಿ ಪಟವರ್ಧನ ಕುಲಕರ್ಣಿ ಅವರು ಇಂಗ್ಲಿಷಿಗೆ ಅನುವಾದಿಸಿದ್ದನ್ನು ಲೇಖಕಿ ಸಾರಾ ಅಬೂಬಕರ್ ಅವರು ಕನ್ನಡೀಕರಿಸಿದ ಕೃತಿಯೇ-ಮುಸ್ಲಿಂ ಮಹಿಳೆಯರು ಮತ್ತು ತಲಾಖ್. ಸ್ವತಃ ತಂಗಿಯು ತಲಾಖ್ ಕ್ರೌರ್ಯಕ್ಕೆ ಒಳಗಾದಾಗ ಲೇಖಕ ಸೈಯದ್ ಭಾಯಿ ಅವರು ವಿವಿಧ ಹಂತಗಳಲ್ಲಿ ಹೋರಾಟ ನಡೆಸಿದ್ದರ ಫಲವೇ ಈ ಕೃತಿ. 1985ರ ಸುಮಾರಿಗೆ ಸುಪ್ರೀಂಕೋರ್ಟ್ ಶಾಬಾನು ಪ್ರಕರಣದಲ್ಲಿ ಮಹತ್ವದ ತೀರ್ಪು ಅಂದರೆ ವಿಚ್ಛೇದಿತ ಮಹಿಳೆಗೆ ಜೀವನಾಂಶ ನೀಡುವಂತೆ ಆದೇಶಿಸಿತ್ತು. ತಾಹಿರಾಬಿ ಅವರ ಪ್ರಕರಣದಲ್ಲೂ (1974) ಸುಪ್ರೀಂಕೋರ್ಟ್ ಸಿಆರ್ ಪಿಸಿ 125ರನ್ವಯ ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡುವಂತೆ ನಿರ್ದೇಶಿತ್ತು. ಆದರೆ, ಸರ್ಕಾರ ವಿಚ್ಛೇದಿತ ಮಹಿಳೆಗೆ ಒಂದೆರೆಡು ಸಾವಿರ ರೂ. ಜೀವನಾಂಶ ನೀಡಿದರೆ ಸಾಕು ಎಂದು ಸಿಆರ್ ಪಿಸಿ 127 (3) ಕಾನೂನು ರೂಪಿಸಿತು. ಆದರೆ, ಇದು ತಲಾಖ್ ಪ್ರಕರಣಗಳನ್ನು ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸಹ ತೀರ್ಪನ್ನು ಗೌರವಿಸಿದ್ದರು. ಮುಂದೆ, ಅವರ ರಾಜಕೀಯ ನಡೆ ಹೇಗೆ ಬದಲಾಯಿತು ಎಂಬ ಬಗ್ಗೆ ವಿವರಣೆ ಇದೆ. ಸುಪ್ರೀಂ ತೀರ್ಪಿನ ವಿರುದ್ಧ ಅಂದರೆ ದೇಶದಲ್ಲಿ ಮುಸ್ಲಿಂ ಅಪಾಯದಲ್ಲಿದೆ ಎಂದು ಪ್ರತಿಭಟನೆಗಳೂ ನಡೆದವು. ನಂತರ ಅಂದಿನ ರಾಷ್ಟ್ರಪತಿ ಜೈಲ್ ಸಿಂಗ್ ನಡೆ, ಮುಸ್ಲಿಂ ಸಂಸದರ, ನಾಯಕರ ನಡೆಗಳು, ಪಕ್ಷ ಕೇಂದ್ರಿತ ಅಭಿಪ್ರಾಯಗಳು, ಮಸ್ಲಿಂ ಸಮುದಾಯ ಮಾತ್ರವಲ್ಲ; ಇತರೆ ಧರ್ಮಿಯರ ಸ್ಪಂದನ-ವಿರೋಧಗಳು ಎಲ್ಲವನ್ನೂ ದಾಖಲಿಸಿದ ಮಹತ್ವದ ಕೃತಿ ಇದು.

About the Author

ಸಾರಾ ಅಬೂಬಕ್ಕರ್
(30 June 1936 - 10 January 2023)

ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು  ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು.  ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...

READ MORE

Related Books