ಮೂರು ಪಂಜಾಬಿ ನಾಟಕಗಳು

Author : ಪಂಚಾಕ್ಷರಿ ಹಿರೇಮಠ

Pages 206

₹ 65.00




Year of Publication: 2001
Published by: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ
Address: #ಎ-5, ಗ್ರೀನ್ ಪಾರ್ಕ್, ನವದೆಹಲಿ-110016

Synopsys

ಬಲವಂತ ಗಾರ್ಗಿ ಅವರ ಕಮ್ಮಾರ, ಕರ್ತಾರಸಿಂಗ್ ದುಗ್ಗಲ್ ಅವರ ಹಳೆಯ ಬಾಟಲಿಗಳು ಹಾಗೂ ಸಂತಸಿಂಗ್ ಸೇಕೋ ಅವರ ದಮಯಂತಿ-ಈ ಮೂರು ಪಂಜಾಬಿ ನಾಟಕಗಳನ್ನು ಡಾ. ಪಂಚಾಕ್ಷರಿ ಹಿರೇಮಠ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಂಜಾಬಿ ಸಾಹಿತ್ಯದಲ್ಲಿ ನಾಟಕಗಳ ರಚನೆಯು ಸುದೀರ್ಘ ಇತಿಹಾಸ ಹೊಂದಿಲ್ಲ. ಇತ್ತೀಚಿನದಾದರೂ ಇತಿಹಾಸವಾದರೂ ರೋಮಾಂಚಕಾರಿಯಾಗಿದೆ ಎಂಬುದನ್ನು ವಿಮರ್ಶಕರು ಒಪ್ಪುತ್ತಾರೆ. ಪಂಜಾಬ್ ಭಾಷೆಯೂ ಬಲ್ಲ ಬಹುಭಾಷಿಕ ಪಂಚಾಕ್ಷರಿ ಹಿರೇಮಠ, ಮೂಲಕ್ಕೆ ಧಕ್ಕೆ ಬಾರದ ಹಾಗೆ ನಾಟಕಗಳನ್ನು ಅನುವಾದಿಸಿದ್ದಾರೆ. ಈ ಮೂರು ನಾಟಕಗಳು ಪಂಜಾಬ ಸಾಹಿತ್ಯ ವಲಯದಲ್ಲಿ ಬಹು ಚರ್ಚಿತವಾದವುಗಳು.

About the Author

ಪಂಚಾಕ್ಷರಿ ಹಿರೇಮಠ
(06 January 1933)

ಪಂಚಾಕ್ಷರಿ ಹಿರೇಮಠ ಅವರು 1933ರ ಜನೆವರಿ 6 ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದರು. ತಾಯಿ ಬಸಮ್ಮ; ತಂದೆ ವೇದಮೂರ್ತಿ ಮಲಕಯ್ಯ. 2 ವರ್ಷದವರಿದ್ದಾಗ ಪಂಚಾಕ್ಷರಿ ತಮ್ಮ ತಂದೆಯನ್ನು ಕಳೆದುಕೊಂಡರು.  ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ  ಹೈ-ಕ ವಿಮೋಚನಾ ಚಳವಳಿ ಆರಂಭವಾಗಿತ್ತು. ವಿಮೋಚನೆಯಾದ ಬಳಿಕ ಬಿಸರಹಳ್ಳಿಗೆ ಮರಳಿದ ಪಂಚಾಕ್ಷರಿ ಅವರು ಕೊಪ್ಪಳ, ಕಲಬುರಗಿ ಸುತ್ತಾಡಿ ಕೊನೆಗೆ ಧಾರವಾಡಕ್ಕೆ ಬಂದರು. ಅವರು ಸ್ವಾಧ್ಯಾಯ ಬಲದಿಂದಲೇ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ...

READ MORE

Related Books