ಮೂವತ್ತೈದು ಗಜ಼ಲುಗಳು

Author : ಎಚ್.ಎಸ್. ಮುಕ್ತಾಯಕ್ಕ

Pages 56

₹ 50.00




Year of Publication: 2004
Published by: ಸಿ.ವಿ.ಜಿ. ಪಬ್ಲಿಕೇಷನ್ಸ್
Address: ನಂ 20. 2ನೇ ಮುಖ್ಯರಸ್ತೆ. ಜಬ್ಬರ್ ಬ್ಲಾಕ್, ವೈಯಾಲಿ ಕಾವಲ್,  ಬೆಂಗಳೂರು - 560003
Phone: 08023313400

Synopsys

ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕೃತಿ ‘ಮೂವತ್ತೈದು ಗಜ಼ಲುಗಳು’. `ಸದಾ ಜನರ ಕೆಂಗಣ್ಣಿಗೆ ಕಣ್ಗಾವಲಿಗೆ ಬೆನ್ನು ತಿರುಗಿಸಿ ನಡೆದ ಯಾರ ಅಂಕೆಗೂ ಅಳತೆಗೂ ಸಿಗದ ದೂರ ಕ್ಷಿತಿಜದಂತೆ ನಾನು’, `ಮಧುಶಾಲೆಯಲ್ಲಿ ಬಟ್ಟಲುಗಳ ಮಾತಾಡಿಲ್ಲ ಕಂಬನಿ ತುಳುಕಿಲ್ಲ ಈಗ ತಾನೆ ಸ್ವಸ್ತಿ ಹೇಳಿದೆಯಲ್ಲ ಆಗಲೆ ಹೋಗುವೆಯೆನ್ನುವಿಯಲ್ಲ’, `ಹೇಗಾಗಿ ಹೋಗಿದೆ ಇಂದು ಈ ನನ್ನ ದೇಶ ಸೂರ್ಯನನ್ನು ಹೂತಿಟ್ಟಂಥ ಈ ನನ್ನ ದೇಶ’, ‘ಇಷ್ಟಾದರೂ ನನ್ನ ಎದೆಯ ಪಾತ್ರ ಬರಿದಾಗಲೇ ಇಲ್ಲ ಆಳದಿಂದ ಕವಿತೆಯ ಕಿಂಕಿಣಿ ಕೇಳಿ ಬಂತು ನಾನು ನಗಲು’, ‘ಬೆಡಗಿನ ಸಂಜೆ ಇಳೆಗೆ ಇಳಿದಿದೆ ಆದರೂ ನೀನಿನ್ನು ಬರಲಿಲ್ಲ ಇರುಳು ನಕ್ಷತ್ರಗಳ ಮುಡಿಸಿದ ಆದರೂ ನೀನಿನ್ನು ಬರಲಿಲ್ಲ’, ‘ಕೂಡಿ ಆಡಿದವರೆಲ್ಲ ಒಂದು ದಿನ ಅಗಲಲೇಬೇಕು ಲೋಕದ ನಿಯಮವೇ ಹಾಗೆ ಒಂದು ದಿನ ಹೋಗಲೇಬೇಕು’, ‘ಮುಗ್ಧ ಹಸುಳೆಗಳಿಗೆ ಈ ಜಗವ ಬಿಟ್ಟುಕೊಡಲೇಬೇಕು ಆಗ ಎಲ್ಲ ಸುಖ ಶಾಂತಿಯಲಿರುವಾಗ ನಾನಿರುವೆನೋ ಇಲ್ಲವೊ’, ‘ಎಂದೆಂದಿಗೂ ಸೂರ್ಯ ಮುಳುಗಬಾರದೆನ್ನುವ ಹಂಬಲವು ನಮಗೆ ರವಿಯ ಕೆಂಬಣ್ಣವು ನನ್ನ ತಿಲಕದೊಡನೆ ಚಿನ್ನಾಟವಾಡುತಿದೆ’.ಇಂತಹ ಸಾಲುಗಳನ್ನೊಳಗೊಳಗಂಡ ಮೂವತ್ತೈದು ಗಜಲುಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

 

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Related Books