ರವೀಂದ್ರ ಭಟ್ಟ ಅವರು ಬರೆದ ಲೇಖನಗಳ ಸಂಕಲನ ‘ಮೈಸೂರೆಂಬ ಬೆರಗು’. ಅವರು ಪ್ರಜಾವಾಣಿ ಹಾಗೂ ಸುಧಾ ಪತ್ರಿಕೆಗಳಲ್ಲಿ ಮೈಸೂರಿನ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಈ ಸಂಕಲನವನ್ನು ಹೊರತರಲಾಗಿದೆ. ಕೃತಿಯ ಪರಿವಿಡಿಯಲ್ಲಿ ಲಲಿತಾ ನಾಯಕರ ಮೈಸೂರು ನೆನಪು, ದಸರೆಗೆ ಬಂದ ಗುರು, ಹಾದಿಬೀದಿಯಲ್ಲಿ ಕುವೆಂಪು ಕಂಪು, ಪಂಜರದ ನೆಂಟರಿಗೆ ಊಟೋಪಚಾರ, ಪರಿಸರ ಸ್ನೇಹಿ ನೈರ್ಮಲ್ಯ ಪಾರ್ಕ್, ಅನಾಥ ಮಹಿಳೆಯರ ಆಶಾದೀಪ, ಮೊದಲಿಯಾರಕುಪ್ಪಂ ಮೈಸೂರು ಕಾಲೋನಿ, ಮೈಸೂರಿಗೂ ಬಂತು ಅರ್ಬನ್ ಹಾತ್!, ಕಾವೇರಿ ನೋಡಲು..ಕೊಳವೆ ಬಾವಿ ನೀರು ಕುಡಿಯಲು.., ಜನಹಿತದ ‘ಮಹಾರಾಜ’ ಪಥ ಸೇರಿದಂತೆ 69 ಶೀರ್ಷಿಕೆಗಳ ಮೈಸೂರು ಬಗೆಗಿನ ಲೇಖನಗಳು ಈ ಕೃತಿಯಲ್ಲಿವೆ.
ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು. ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...
READ MORE