ನಾಡ ಹಾಡುಗಳು

Author : ಬುರ್ಲಿ ಬಿಂದುಮಾಧವ (ಆಚಾರ್ಯ)

Pages 201

₹ 1.00




Year of Publication: 1940
Published by: ಮಿಂಚಿನ ಬಳ್ಳಿ ಪ್ರಕಾಶನ
Address: ಮಿಂಚಿನ ಬಳ್ಳಿ ಚಾವಡಿ, ಜವಳಿಪೇಟೆ, ಧಾರವಾಡ

Synopsys

ದೇಶದ ಸ್ವಾತಂತ್ಯ್ರ ಚಳವಳಿ ಸಂದರ್ಭದಲ್ಲಿ ಕನ್ನಡದಲ್ಲಿ ರಾಷ್ಟ್ರೀಯ ಗೀತೆಗಳುಂಟೆ? ಎಂಬ ಪ್ರಶ್ನೆ ಕಾಡತೊಡಗಿ, ಅದಕ್ಕೆ ಪರಿಹಾರ ಎಂಬಂತೆ ಸಿಕ್ಕ ಗೀತೆಗಳನ್ನು ಅಂದು (1940) ಇಲ್ಲಿ ಸಂಗ್ರಹಿಸಲಾಗಿದೆ. ರಾಷ್ಟ್ರಾಭಿಮಾನವನ್ನು ಬೆಳೆಸುವ ಗೀತೆಗಳಿವು. ವಿವಿಧ ಲೇಖಕರು, ಕವಿಗಳು ಬರೆದಿದ್ದನ್ನು ಬುರ್ಲಿ ಬಿಂದು ಮಾಧವ ಆಚಾರ್ಯರು ಸಂಪಾದಿಸಿದ್ದಾರೆ.

ರಜಪೂತರ ಚಾರಣ ಗೀತೆಗಳು, ಮರಾಠರ ಶಾಹಿರಗಳು, ಕನ್ನಡಿಗರ ಕಂಠೀರವ ನರಸರಾಜ ವಿಜಯ, ಕುಮಾರರಾಮನ ಕಥೆಗಳು, ಲಾವಣಿಗಳು ಒಂದು ರೀತಿಯಲ್ಲಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸುವ ಕಾವ್ಯಗಳೇ ಆಗಿವೆ. ರಾಷ್ಟ್ರೀಯ ಮಟ್ಟದಲ್ಲಿ ಠ್ಯಾಗೂರು, ಸರೋಜಿನಿ, ಬಂಕಿಮಚಂದ್ರ ಹಾಗೂ ಕನ್ನಡದಲ್ಲಿ ಶಾಂತಕವಿ, ದ.,ರಾ. ಬೇಂದ್ರೆ, ವಿ.ಸೀ. ಕೆ.ಪಿ.ಪುಟ್ಟಪ್ಪ, ಸಾಲಿ, ಗೋವಿಂದ ಪೈ ಮೊದಲಾದವರು ಇದ್ದಾರೆ. ರಾಷ್ಟ್ರೀಯ ಗೀತೆಗಳ ಮಹತ್ವ ಮುಂದಿನ ಪೀಳಿಗೆಗೆ ತಿಳಿಯಬೇಕು ಎಂಬುದು ಈ ಕೃತಿ ರಚನೆಯ ಹಿಂದಿನ ಉದ್ದೇಶ ಎಂದು ಸಂಪಾದಕರು ಸ್ಪಷ್ಟಪಡಿಸಿದ್ದಾರೆ.

About the Author

ಬುರ್ಲಿ ಬಿಂದುಮಾಧವ (ಆಚಾರ್ಯ)
(18 August 1899 - 27 October 1981)

ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು.  ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ...

READ MORE

Related Books