ನಾದಯಾತ್ರೆ

Author : ವಸಂತ ಕವಲಿ

Pages 98




Year of Publication: 1977
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಚಾಮರಾಜಪೇಟೆ, ಬೆಂಗಳೂರು-18

Synopsys

ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪಂಚವಾರ್ಷಿಕ ಯೋಜನೆಯಡಿ ಪ್ರಕಟಿಸಿದ ಕೃತಿ -ನಾದಯಾತ್ರೆ. ವಸಂತ ಕವಲಿ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದ ಶ್ರೀರಂಗ ಅವರು ‘ಸಂಗೀತದ ಹುಟ್ಟು, ಬೆಳವಣಿಗೆ, ವೈರುಧ್ಯಗಳು, ಅವುಗಳನ್ನು ಬಳಕೆಗೆ ತಂದ ವಿಸ್ವಾಂಸರ ಮಾಹಿತಿಗಳನ್ನೂ ಕುರಿತು ವಿವರಿಸುತ್ತದೆ. ಸಂಗೀತದ ಕಲಾ ವೈಭವದ ಪ್ರದರ್ಶನಕ್ಕೆ ಈ ಕೃತಿಯು ಒಂದು ಕನ್ನಡಿಯಾಗಿದೆ ಎಂದು ಪ್ರಶಂಸಿಸಿದ್ದಾರೆ.

ಲೇಖಕ ವಸಂತ ಕವಲಿ ಅವರು ತಮ್ಮ ಪ್ರಸ್ತಾವನೆಯಲ್ಲಿ ‘ತಮ್ಮ ತಂದೆ ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ ಅವರು ಸಂಗೀತ ವಿದ್ವಾಂಸರು. ಈ ಹಿನ್ನೆಲೆಯಲ್ಲಿ ಅವರಿಂದ ಕೇಳಿ ತಿಳಿದ ಹಾಗೂ ಅವರ ಬಳಿಗೆ ಬಂದ ಸಂಗೀತ ವಿದ್ವಾಂಸ ಮಹನೀಯರಿಂದ ಸಂಗ್ರಹಿಸಿದ ಮಾಹಿತಿಯನ್ನು ನಾದಯಾತ್ರೆ ಕೃತಿಯಲ್ಲಿ ಕಟ್ಟಿಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.

About the Author

ವಸಂತ ಕವಲಿ
(12 October 1931 - 17 November 1988)

ವಸಂತ ಕವಲಿಯವರು (ಜನನ: 12-10-1931) ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ತಂದೆ ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ, ತಾಯಿ ಮರಿಯಮ್ಮ, ಹಾವೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಬೂರ್ಜ್ವಾ ಟ್ರಾಜೆಡಿ ’ವಿಷಯವಾಗಿ ಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದರು. ಕವಿ. ನಾಟಕಕಾರರು. ನಿರ್ದೇಶಕರು, ಬೆಂಗಳೂರು ಹಾಗೂ ಭದ್ರಾವತಿ ಆಕಾಶವಾಣಿಯಲ್ಲಿ ಹಲವು ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಮುಂಬೈಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ಅಲಂಕಾರ, ಕಣ್ವ ಕೇಶನ, ಘನ ಆನಂದ, ತಾನಸೇನ, ಮದನಲಾಲ್ ದಿಂಗ್ರ-ಹೀಗೆ ...

READ MORE

Related Books