ನಾದದ ನವನೀತ

Author : ಎಸ್. ದಿವಾಕರ್‌

Pages 299

₹ 245.00




Year of Publication: 2011
Published by: ಪ್ರಿಸಮ್ ಬುಕ್ಸ್ ಪ್ರೈ.ಲಿ.
Address: ನಂ.1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು- 560070
Phone: 08026713979

Synopsys

‘ನಾದದ ನವನೀತ’ ಲೇಖಕ ಎಸ್. ದಿವಾಕರ್ ಅವರು ಸಂಪಾದಿಸಿರುವ ಸಂಗೀತ ಕುರಿತ ಪ್ರಬಂಧಗಳ ಸಂಕಲನ. ಕನ್ನಡದಲ್ಲಿ ಸಂಗೀತವನ್ನು ಕುರಿತ ಶಾಸ್ತ್ರಗ್ರಂಥಗಳಂತೂ ಹೇರಳವಾಗಿವೆ. ಅವು ಸಂಗೀತಗಾರರಿಗಷ್ಟೇ ಗ್ರಾಹ್ಯವಾಗುವ, ಸಾಮಾನ್ಯ ಸಂಗೀತ ಪ್ರಿಯರು ಬಡಪೆಟ್ಟಿಗೆ ಗ್ರಹಿಸಲಾಗದ ಶಾಸ್ತ್ರಗ್ರಂಥಗಳು. ಇವುಗಳ ಜೊತೆಗೆ ಸಂಗೀತ ಪಾಠಗಳಿರುವ ಹಲವಾರು ಪಠ್ಯಪುಸ್ತಕಗಳೂ ಇವೆ. ಇವು ಗುರುಮುಖೇನ ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ನೆರವಾಗಬಲ್ಲ ಪುಸ್ತಕಗಳು. ಆದರೆ ಸಾಮಾನ್ಯರಿಗೆ ಸಂಗೀತ ಕಲೆಯನ್ನು, ಅದರ ವಿಕಾಸವನ್ನು, ಆದರ ನಾದವೈಭವವನ್ನು, ಅನುಭೂತಿಯನ್ನು, ಇತರ ಕಲೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವ ಆದರ ಅನನ್ಯತೆಯನ್ನು, ಮನಸ್ಸಿನ ಮೇಲೆ ಅದು ಉಂಟು ಮಾಡುವ ಪರಿಣಾಮವನ್ನು ಸಂಗೀತಗಾರರ ವೈಶಿಷ್ಟ್ಯ, ಮನೋಧರ್ಮಗಳನ್ನು ಸರಳವಾಗಿ ಮನಮುಟ್ಟುವಂತೆ ವಿವರಿಸುವ ಗ್ರಂಥಗಳು ಮಾತ್ರ ಕೆಲವೇ ಕೆಲವು. ಕನ್ನಡದಲ್ಲಿ ಕಳೆದ ಮುಕ್ಕಾಲು ಶತಮಾನದಲ್ಲಿ ಪ್ರಕಟವಾಗಿರುವ ಸೊಗಸಾದ ಪ್ರಬಂಧಗಳು ಈ ಸಂಕಲನದಲ್ಲಿವೆ. ವಿವಿಧ ಸಂದರ್ಭಗಳಲ್ಲಿ ಬರೆಯಲಾದ ಈ ಪ್ರಬಂಧಗಳಲ್ಲಿ ಶಾಸ್ತ್ರೀಯ ಸಂಗೀತದ ವಿವಿಧ ಆಯಾಮಗಳ ವಿಶ್ಲೇಷಣೆ ಇದೆ, ಮೇರುಸದೃಶ ಸಂಗೀತಗಾರರ ನುಡಿಚಿತ್ರಗಳಿವೆ, ಕೆಲವು ರಾಗಗಳ ಸ್ವರೂಪದರ್ಶನವಿದೆ, ಸುಗಮ ಸಂಗೀತ, ಸಿನಿಮಾ ಸಂಗೀತ, ಇತ್ಯಾದಿ ಪ್ರಕಾರಗಳ ಪರಿಚಯವಿದೆ. ಮುಖ್ಯವಾಗಿ ಸಂಗೀತದಲ್ಲಿ ಪರಿಶ್ರಮವೇನೂ ಇಲ್ಲದವರನ್ನು, ಸಾಹಿತ್ಯ ಹಾಗೂ ಇತರ ಕಲಾಪ್ರಕಾರಗಳಲ್ಲಿ ತೊಡಗಿರುವವರನ್ನು ಮತ್ತು ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿರುವ ಸಂಕಲನ ಇದು.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books