ನಾಳಿನ ನಾಗರಿಕರಿಗೆ ನೂರೆಂಟು ಸಲಹೆ

Author : ಸಂಪಟೂರು ವಿಶ್ವನಾಥ್

Pages 155

₹ 110.00




Year of Publication: 2020
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ನಾಳಿನ ನಾಗರಿಕರಿಗೆ ನೂರೆಂಟು ಸಲಹೆ-ಈ ಕೃತಿಯನ್ನು ಲೇಖಕ ಸಂಪಟೂರು ವಿಶ್ವನಾಥ ಅವರು ರಚಿಸಿದ್ದು, ಉತ್ತಮ ಮಾರ್ಗದರ್ಶನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕು ರೂಪಿಸಿಕೊಳ್ಳುವಂತೆ ಪ್ರೇರಣಾತ್ಮಕವಾಗಿ ಬರೆದ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ಏಕೆಂದರೆ, ತಾರುಣ್ಯ ವಯಸ್ಸಿನಲ್ಲಿ ಸೂಕ್ತ ಮಾರ್ಗದರ್ಶನವಿಲ್ಲದೇ ಎಷ್ಟೊ ಯುವಕರು ತಮ್ಮ ವಿಚಾರ ಶಕ್ತಿಯನ್ನು, ಸಮಾಜಘಾತುಕ ಕೆಲಸಗಳಿಗೆ ಬಳಸಿಕೊಂಡು ಸಮಾಜದಲ್ಲಿ ಅಪಕೀರ್ತಿ ಪಡೆಯುತ್ತಾರೆ, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಇಂತಹ ಅನಾಹುತದಿಂದ ಯುವಕರನ್ನು ಪಾರು ಮಾಡಬೇಕೆಂಬ ಕಳಕಳಿಯಿಂದ ಲೇಖಕರು ಇಲ್ಲಿ ಸಲಹೆಗಳನ್ನು ನೀಡಿದ್ದು ವಿಶೇಷ.

About the Author

ಸಂಪಟೂರು ವಿಶ್ವನಾಥ್
(28 February 1938)

ಲೇಖಕ ಸಂಪಟೂರು ವಿಶ್ವನಾಥ್‌ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್‌ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...

READ MORE

Related Books