ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯಲಾರೆ!

Author : ಎಚ್.ಎಸ್. ಬೇನಾಳ

Pages 92

₹ 60.00




Year of Publication: 2015
Published by: ಸಹನಾ ಪ್ರಕಾಶನ
Address: ಪ್ಲಾಟ್‌ ನಂ. 408, ಸಿ.ಐ.ಬಿ ಕಾಲೋನಿ, ಕೇಂದ್ರ ಬಸ್‌ ನಿಲ್ದಾಣದ ಹಿಂದುಗಡೆ, ಎಂಎಸ್.ಕೆ. ಮಿಲ್‌ ರಸ್ತೆ, ಗುಲಬರ್ಗಾ-585103
Phone: 9901177823

Synopsys

‘ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ, ಹಿಂದೂ ಆಗಿ ಸಾಯಲಾರೆ!’ ಎಂದು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು 1935 ರಲ್ಲಿ ಘೋಷಣೆ ಮಾಡಿದರು. ಈ ಕುರಿತು ಲೇಖಕರು ತಮ್ಮ ವಿಚಾರ ವ್ಯಕ್ತಪಡಿಸಿ ಬರೆದಿರುವ ಕೃತಿ ಇದು. ಈವರೆಗೂ ನಾಲ್ಕು ಮುದ್ರಣಗಳನ್ನು ಕಂಡು ಜನ ಮೆಚ್ಚುಗೆ ಗಳಿಸಿದೆ.

ಅಂಬೇಡ್ಕರರು ತಮ್ಮ ಜೀವಿತದ ಕಾಲದಲ್ಲಿ ವಿಶೇಷವಾಗಿ ಅವರು ತೆಗೆದುಕೊಂಡ ಹೋರಾಟಗಳೆಂದರೆ, ಚೌಡಾರ ಕೆರೆಯ ನೀರು, ಕಾಳರಾಮ ಮಂದಿರ ಪ್ರವೇಶ, ದಲಿತರಿಗೆ ಪ್ರತ್ಯೇಕ ಚುನಾವಣೆ ಕ್ಷೇತ್ರಗಳು, ದುಂಡು ಮೇಜಿನ ಪರಿಷತ್ತು, ಪೂನಾ ಫ್ಯಾಕ್ಟ್ ಒಪ್ಪಂದ, ಹಿಂದೂ ಕೊಡ್ ಬಿಲ್' ಈ ಬಗ್ಗೆ ಹೋರಾಟದ ಮೂಲಕ ಅವು ಕಾರ್ಯ ರೂಪಕ್ಕೆ ಬರುವಂತೆ ಮಾಡಿದ್ದನ್ನು ಮತ್ತು ಸದುದ್ದೇಶವನ್ನು ಲೇಖಕರು ಚಿಕ್ಕದಾಗಿ, ಚೊಕ್ಕವಾಗಿ ವಿವರಿಸಿದ್ದಾರೆ.

ಅಂಬೇಡ್ಕರರು ಹಿಂದೂ ಧರ್ಮದ ಅನೇಕ ಕಟ್ಟುಪಾಡಿನ ಅಲೆಗಳಿಂದ ನೊವುಂಡು ಅದರ ವಿರುದ್ದ ಮೆಟ್ಟಿ ನಿಂತು, ಬುದ್ಧನಿಗೆ ಶರಣಾದರು. ‘ಹಿಂದೂ ಧರ್ಮದ ಬಗ್ಗೆ ರೋಸಿ ಹೊದ ಅವರು’ ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ!” ಎಂದು ಬೌದ್ಧ ಧರ್ಮ ಸ್ವೀಕರಿಸಿದ ಬಗೆಯನ್ನು ಇಲ್ಲಿ ಮನಗಾಣಬಹುದಾಗಿದೆ.

About the Author

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...

READ MORE

Related Books