ನಾಟಕಗಳಲ್ಲಿ ಅವ್ವ

Author : ಚಂದ್ರಶೇಖರ ವಸ್ತ್ರದ

Pages 304

₹ 150.00




Year of Publication: 2020
Published by: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ 
Address: 52, ಆದರ್ಶ ನಗರ, ಹುಬ್ಬಳ್ಳಿ

Synopsys

‘ನಾಟಕಗಳಲ್ಲಿ ಅವ್ವ’ ಚಂದ್ರಶೇಖರ ವಸ್ತ್ರದ ಅವರ ಕೃತಿ. ಇದು ತಾಯಿ ಹಾಗೂ ತಾಯ್ತನವನ್ನು ಕೇಂದ್ರ ವಸ್ತುವನ್ನಾಗಿರಿಸಿಕೊಂಡು ರಚಿಸಿದ ಐದು ನಾಟಕಗಳ ಸಂಕಲನ. ವೃತ್ತಿರಂಗಭೂಮಿಯ ಎರಡು ನಾಟಕಗಳು, ಎರಡು ಹವ್ಯಾಸಿ ನಾಟಕಗಳು ಹಾಗೂ ಒಂದು ಬಾನುಲಿ ರೂಪಕವನ್ನೊಳಗೊಂಡಿದೆ. ತಾಯಿ ಹಾಗೂ ತಾಯ್ತತನದ ಹಲವು ಮಜಲುಗಳನ್ನು ಬಿಚ್ಚಿ ಇಡುತ್ತದೆ. ತನ್ನದಲ್ಲದ ಮಗುವಿಗೆ ತಾಯಿಯಾಗುವ ಪ್ರಸಂಗ ಒದಗಿದ ಲಂಬಾಣಿ ಹೆಣ್ಣೊಬ್ಬಳು, ಲೋಕನಿಂದೆ, ಮಾನಸಿಕ ಹಿಂಸೆ ಏನೆಲ್ಲವನ್ನು ಸಹಿಸಿ ತಾಯ್ತನವನ್ನು ಮೆರೆವ ನಾಟಕ ಹಡೆದವ್ವ ತಾಯಿ ಎನ್ನುವುದು. ವಾಸ್ತವವಾಗಿ ಹೆಣ್ಣಿನ ಜೈವಿಕತೆಯನ್ನು ನೆನಪಿಸುವ ಪದವಾದರೂ ತಾಯ್ತನ ಎನ್ನುವುದು ಕೇವಲ ಹೆರುವಿಕೆಗೆ ಸಂಬಂಧಿಸಿದ್ದಲ್ಲ ಅದೊಂದು ಮಾನಸಿಕ ಸ್ಥಿತಿ  ಎನ್ನುವುದನ್ನು ಸಾರುವ ಬ್ರೆಕ್ಟ್ ನ ಕಕೇಶಿಯನ್ ಚಾಕ್ ಸರ್ಕಲ್ ನಿಂದ ಪ್ರೇರಿತವಾದ ನಾಟಕ ‘ಧರ್ಮಪುರಿಯ ಶ್ವೇತವೃತ್ತ’. ಮಗ ದುಷ್ಟನಾಗಿರಲಿ ಶಿಷ್ಟನಾಗಿರಲಿ, ಅವನಿಗಾಗಿ ಮಿಡಿವ ತಾಯಿಯ ಹೃದಯ ಸದಾ ವಾತ್ಸಲ್ಯಮಯ ಎನ್ನುವುದನ್ನು ಬಿಂಬಿಸುವ ನಾಟಕ -ತಾಯಿಯ ಕರಳು. ತಾಯಿಯ ಪಾಲಿಗೆ ತನ್ನ ಮಕ್ಕಳಷ್ಟೇ ಮಕ್ಕಳಲ್ಲ. ಹಸಿದ ಹೊಟ್ಟೆಗಳನ್ನು ಹೊತ್ತವರೂ ಮಕ್ಕಳೇ ಎಂಬುದನ್ನು ಸಾರುವ ನಾಟಕ -ರೊಟ್ಟಿ. ಪಿ. ಲಂಕೇಶ ಅವರ ಕವಿತೆ, ಆತ್ಮಚರಿತ್ರೆ, ಬದುಕನ್ನಾಧರಿಸಿ ರಚಿಸಿದ ತಾಯ್ತನದ ವಾಸ್ತವತೆಯನ್ನು ಚಿತ್ರಿಸುವ ನಾಟಕ -ಅವ್ವ. ಈ ಐದು ನಾಟಕಗಳನ್ನೊಳಗೊಂಡ ಈ ಕೃತಿ, ಏಕ ವಿಷಯ ಕೇಂದ್ರಿತ ಕನ್ನಡದ ಮೊದಲ ನಾಟಕ ಸಂಕಲನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books