ನಾಗಬೀದಿಯೊಳಗಿಂದ....

Author : ಗುರುರಾಜ್ ಸನಿಲ್

Pages 260

₹ 225.00




Year of Publication: 2014
Published by: ಗೀತಾ ಪ್ರಕಾಶನ
Address: # ಸಂತೋಷನಗರ, ಅಟ್ಟೂರು, ಯಲಹಂಕ, ಬೆಂಗಳೂರು-560044

Synopsys

ಉರಗತಜ್ಞ ಗುರುರಾಜ ಸನಿಲ್ ಅವರ ಕೃತಿ-ನಾಗಬೀದಿಯೊಳಗಿಂದ. ಹಾವುಗಳ ಕುರಿತು ಮನುಷ್ಯರಲ್ಲಿದ್ದ ನಂಬಿಕೆಗಳು ನೂರಾರು. ಅವುಗಳ ಸತ್ಯಾಸತ್ಯತೆಯು ಪ್ರಶ್ನಾರ್ಹ. ಆದರೆ, ಕುತೂಹಲಕಾರಿ. ಈ ನಂಬಿಕೆಗಳು ಹಾವುಗಳ ಸಂತತಿಯನ್ನು ಉಳಿಸುವಲ್ಲಿ ನೆರವಾಗಿವೆ, ಆದರೆ, ಬಹುತೇಕವಾಗಿ, ಇವುಗಳನ್ನು ಕೊಲ್ಲುವುದಕ್ಕೂ ಪ್ರಚೋದಿಸಿವೆ. ಕರ್ನಾಟಕದ ಕರಾವಳಿಯಲ್ಲಿ ನಾಗಗಳ ಕುರಿತು ವಿಪರೀತ ನಂಬಿಕೆಗಳು ಇವೆ. ಇಂತಹ ನಂಬಿಕೆಗಳ ಸುತ್ತ ಮುತ್ತ ಚರ್ಚಿಸುವುದು ಈ ಕೃತಿಯ ವೈಶಿಷ್ಟ್ಯ. ಆದ್ದರಿಂದ, ಈ ಕೃತಿಗೆ ‘ಕರಾವಳಿ ಕರ್ನಾಟಕದ ನಾಗನಂಬಿಕೆಗಳ ಆಸುಪಾಸು’ ಎಂಬ ಉಪಶೀರ್ಷಿಕೆಯ ನೀಡಿದ್ದು, ಪರಿಸರ ಸ್ನೇಹಿ ಮನೋಭಾವವನ್ನು ಜನಮಾನಸದಲ್ಲಿ ಬೆಳೆಸುವುದೂ ಸಹ ಈ ಕೃತಿಯ ಉದ್ದೇಶವಾಗಿದೆ.

About the Author

ಗುರುರಾಜ್ ಸನಿಲ್
(14 June 1968)

ಲೇಖಕ ಗುರುರಾಜ್ ಸನಿಲ್ ಅವರು ಮೂಲತಃ ಉಡುಪಿ ಜಿಲ್ಲೆಯ ತೆಂಕುಪೇಟೆಯವರು. ತಂದೆ ಶೇಷಪ್ಪ,  ತಾಯಿ ಸುಂದರಿ. ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲೂ ಪೂರೈಸಿದರು. ಹವ್ಯಾಸದೊಂದಿಗೆ ಇವರ ಉರಗ ತಜ್ಞರು. 25 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದ ದಾಖಲೆ ಇವರದ್ದು. ಹಾವಿನ ಮೊಟ್ಟೆಗಳನ್ನು ಸಂಗ್ರಹಿಸಿ, ಕಾವು ನೀಡಿ ಮರಿಗಳನ್ನು ಮಾಡಿದ ನಂತರ ಅವುಗಳನ್ನು ಕಾಡಿಗೆ ಬಿಟ್ಟ ಪ್ರಸಂಗಗಳೂ ಇವೆ. "ನಮ್ಮ ಮನೆ ನಮ್ಮ ಮರ  ಸಂಸ್ಥೆಯೊಂದಿಗೆ ಈವರೆಗೆ 10ಸಾವಿರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ.  ಕೃತಿಗಳು:  ಹಾವು ನಾವು , ಹಾವು ನಾವು, ದೇವರ ಹಾವು : ನಂಬಿಕೆ ...

READ MORE

Related Books