ನಾಗಚಂದ್ರನ ರಾಮನ ಕಥನ

Author : ಸೃಜನ್ ಗಣೇಶ್ ಹೆಗಡೆ

Pages 292

₹ 360.00




Published by: ದೇಸಿ ಪ್ರಕಾಶನ
Address: #4067/37 ’ಬಿ’ ಬ್ಲಾಕ್, 3 ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, 2 ನೇ ಅಂತ ರಾಜಾಜಿನಗರ, ಬೆಂಗಳೂರು-560010

Synopsys

ಹಳಗನ್ನಡದ ಚಂಪೂಕಾವ್ಯ ಸಂದರ್ಭದಲ್ಲಿ 'ಅಭಿನವ ಪಂಪ' ಖ್ಯಾತಿಯನ್ನು ಪಡೆದ ಕವಿ 'ನಾಗಚಂದ್ರ'ನ 'ಪಂಪ ರಾಮಾಯಣಂ' ಖ್ಯಾತಿಯ "ರಾಮಚಂದ್ರಚರಿತ ಪುರಾಣಂ'ನ ಗದ್ಯಾನುವಾದದೊಂದಿಗೆ ಜೈನಧರ್ಮದ ತತ್ತ್ವಜ್ಞಾನದ ಓದಿನ ಹರಹಿನಲ್ಲಿ ಸತ್ತ್ವಪೂರಿತ ಚಿಂತನೆಯನ್ನು ಬಿತ್ತರಿಸಿದ ವಿಶೇಷ ಕೃತಿ. ಲೇಖಕರೆ ಹೇಳಿದಂತೆ 'ಕಾವ್ಯದ ಕಥನವೂ ಅನುಭವಿಸಬಹುದಾದ ಚಿಂತನವೂ ಎರಕವಾದುದರಿಂದ ಇದು ಕಾವ್ಯ ಕಥನಂ-ಸೇವ್ಯ ಚಿಂತನಂ' ಆಗಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆಯುವಾಗ ಹಿರಿಯ ವಿಮರ್ಶಕರಾದ ಡಾ.ಕೆ.ಕೇಶವಶರ್ಮಾ ಅವರು 'ಅಧ್ಯಯನಶೀಲ ಮನಸ್ಸುಗಳಿಗೆ ಇದೊಂದು 'ಪರಾಮರ್ಶನ ಗ್ರಂಥ' ಎಂದಿದ್ದಾರೆ.

About the Author

ಸೃಜನ್ ಗಣೇಶ್ ಹೆಗಡೆ
(26 September 1997)

ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ.  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ಇದೆ.  ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) . ...

READ MORE

Related Books