ನಕ್ಕರೆ ಅಕ್ಕರೆ

Author : ಗಂಗಾವತಿ ಪ್ರಾಣೇಶ್

Pages 168

₹ 25.00




Year of Publication: 2019
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 9036312786

Synopsys

‘ನಕ್ಕರೆ ಅಕ್ಕರೆ’ ಯಾರಿಗೆ ಬೇಕು ಈ ದುಃಖ, ಇದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಲೇಖನಗಳ ಸಂಕಲನ.

ಕೃತಿಯಲ್ಲಿ ಸಿನಿಮಾ ಎಂಬ ಬುದ್ಧಿ ಕಲಿಸುವ ಶಿಕ್ಷಕ, ಬೆಳಗಾವಿಯ ಕುಂದ ಹಾಸ್ಯ ಕೂಟವೆಂಬ ಕಂದ, ಶಬ್ದ ನಿಶ್ಶಬ್ದಗಳೆರಡಕ್ಕೂ ಅಂಜುವವರ ನಡುವೆ, ಭಯ ಮೂಡಿಸಿಯಾದರೂ, ಒಳ್ಳೆಯವರನ್ನಾಗಿ ಮಾಡೋಣ, ಹೆಸರಿಗೆ ಉಸಿರು ತುಂಬುತ್ತಿದ್ದ ಉರುಟಣೆಗಳು, ಆನೆವಾಲಾ ಅಚ್ಛೆ ದಿನ್ ಅಚ್ಛೆಬಚ್ಛೆ ಮೇ ಹೈ, ಈಗ ಯಾರೂ ಬಿದ್ದು, ಬಿದ್ದು ನಗುವುದಿಲ್ಲ, ಯಾರಾದರೂ ಬಿದ್ದಾಗ ನಗುತ್ತಾರೆ, ಭಜನೆ ಈಗೀಗ ಸಿನಿಮಾ ಹಾಡಿನಂತೆ ಕೇಳಿಸಲಾರಂಭಿಸಿದೆ, ಮುಂದೆ ಶತ್ರುವಾಗಬಲ್ಲವನೆ ನಿಜವಾದ ಗೆಳೆಯ, ಹಿಗ್ಗು ತರುತ್ತಿದ್ದ ಹಬ್ಬಗಳೇಕೆ ಈಗ ಮಬ್ಬು ಕವಿಸುತ್ತಿವೆ, ನಿನ್ನ ಬಳಿ ಎಲ್ಲ ಇದೆ ಓಕೆ, ಮನಶ್ಶಾಂತಿಯೇ ಇಲ್ಲ ಯಾಕೆ ಸೇರಿದಂತೆ 30 ಹಾಸ್ಯ ಲೇಖನಗಳಿವೆ.

About the Author

ಗಂಗಾವತಿ ಪ್ರಾಣೇಶ್
(08 September 1961)

ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ  ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು.  ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್‌ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...

READ MORE

Related Books