ನಳ ದಮಯಂತೀ

Author : ಕೆ.ಎಸ್‍. ನಾರಾಯಣಾಚಾರ್ಯ

Pages 152

₹ 135.00

Buy Now


Year of Publication: 2015
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 0836-2367676

Synopsys

ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ನಳ ದಮಯಂತೀ. ಈ ಎರಡೂ ಪಾತ್ರಗಳ ವಿವಾಹ ಮಹೋತ್ಸವವೇ ಇವರು ಮುಂದೆ ಅನುಭವಿಸಬೇಕಾದ ಎಲ್ಲ ದುರ್ಘಟನೆಗಳಿಗೆ ಕಾಣವಾಗುತ್ತದೆ. ಆದರೂ, ತಾವು ನಂಬಿದ ತತ್ವ, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ನಡೆದುಕೊಂಡು ಬರುವುದೇ ಇಲ್ಲಿಯ ಜೀವಾಳ. ಜೀವನದಲ್ಲಿ ಕಾಣದ ಕೈಯ ಕೈವಾಡ ಹೇಗಿರುತ್ತದೆ.. ಅದು ನಮಗೇ ತಿಳಿಯದೇ ಹಾಗೇ ಬದುಕಿನ ಪ್ರತಿ ಕ್ಷಣದಲ್ಲೂ ಅಡ್ಡಿಯಾಗುತ್ತದೆ. ಕಾಣದ ಕೈಯು ಹೀಗೆ ಮಾಡುವುದಕ್ಕೆ ಕಾರಣಗಳೇನು? ಇವ್ಯಾವುದಕ್ಕೂ ಸೂಕ್ತ ಉತ್ತರ ಸಿಗದಿದ್ದರೂ, ಕಾಣದ ಕೈಯ ಅನುಭವ ಮಾತ್ರ ನಮ್ಮ ಬದುಕಿನುದ್ದಕ್ಕೂ ಆಗುತ್ತಿರುತ್ತದೆ. ಇದನ್ನು ತಳ್ಳಿ ಹಾಕುವಂತಿಲ್ಲ. ಇಂತಹ ಸಂದೇಶ ನೀಡುವ ಕೃತಿಯು ನಳ-ದಮಯಂತಿ. ಕಾಣದ ಕೈ ಏನೇ ಮಾಡಲಿ; ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕು ಸಾಗಿಸಿದ ಈ ನಳ-ದಮಯಂತಿಯ ದಾಂಪತ್ಯ ಜೀವನ ಸಂದೇಶ ನೀಡುವುದಾಗಿದೆ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books