ನಲವತ್ತು ಗಜಲುಗಳು

Author : ಎಚ್.ಎಸ್. ಮುಕ್ತಾಯಕ್ಕ

Pages 102

₹ 75.00




Year of Publication: 2002
Published by: ಶಿಲ್ಪ ಪ್ರಕಾಶನ
Address: ‘ಚೈತ್ರ’ MIG II, 135-136, ಸಿದ್ಧಲಿಂಗ ನಗರ, ಗದಗ - 582102
Phone: 0836538765

Synopsys

ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕೃತಿ ‘ನಲವತ್ತು ಗಜಲುಗಳು’. ‘ಅರ್ಧ ರಾತ್ರಿಯಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು. ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು.' ‘ಯಾವ ನೋವಿನಲ್ಲಿ ಹೇಗೆ ಇರುವೆನೆಂದು ಈ ಜಗಕೇನು ಗೊತ್ತು ಯಾರಿಗೂ 'ಲೆಕ್ಕ ನೀಡಬೇಕಿಲ್ಲ ಏಳು ಬಟ್ಟಲು ತುಂಬು ಸಾಕಿ.' ‘ನನಗಾಗಿ ಯಾರೂ ಕರಗಿ ಉರಿಯಲಿಲ್ಲ. ಆದರೂ ನನ್ನ ಮೇಲೆ ಜಗದ ಕಾವಲಿದೆ.' ‘ಲೋಕದಲ್ಲಿ ಇಂದು ದೀರ್ಘ ಕತ್ತಲೆಯು ಕವಿದಿಹುದು ಎಂದೆಂದೂ ಮುಳುಗದ ಮುಂಜಾವುಗಳು ಅರಳಲಿ’ ಇಂತಹ ಸಾಲುಗಳನ್ನೊಳಗೊಳಗಂಡ ನಲವತ್ತು ಗಜಲುಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Reviews

ಹೊಸತು- ಜುಲೈ -2003

ಉರ್ದು ಕಾವ್ಯಗಳಾದ ಗಜಲ್‌ ಗಳು ಭಾರತದಲ್ಲಿ ಮೊಗಲ ಚಕ್ರವರ್ತಿಗಳ ಕಾಲದಲ್ಲಿ ಬಹುಜನಪ್ರಿಯವಾಗಿ ಗಜಲ್ ಕವಿ ಗಾಯಕರಿಗೂ ಮನ್ನಣೆ ದೊರೆಯಿತು. ಮಧುಶಾಲೆ - ಪ್ರಣಯ - ವಿರಹ - ಉನ್ಮಾದಗ ಸುತ್ತ ಮಾತ್ರ ಗಿರಕಿ ಹೊಡೆಯುತ್ತಿದ್ದ ಗಜಲ್‌ಗಳನ್ನು ಅಲ್ಲಿಂದ ಇತರ ವಿಷಯಗಳಿಗೂ ವಿಸ್ತರಿಸಿ ಕನ್ನಡದಲ್ಲಿಯೇ ಸ್ವತಂತ್ರವಾಗಿ ಓದುವ ಅವಕಾಶ ಕಲ್ಪಿಸಿದವರು ಶ್ರೀಮ ಮುಕ್ತಾಯಕ್ಕ, ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವ ರೇಖಾ ಚಿತ್ರಗಳ ಸೂಕ್ಷ್ಮ ಕುಸುರಿ ಕೆಲಸದಿಂದ ಕಂಗೊಳಿಸುತ್ತವೆ.

 

Related Books