ನಮಗೆ ಎಷ್ಟು ಆಸೆ ಬೇಕು...!

Author : ಸಿ.ಎಚ್. ರಾಜಶೇಖರ್

Pages 152

₹ 108.00




Year of Publication: 2012
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ನಮಗೆಷ್ಟು ಆಸೆ ಬೇಕು. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂಗೆಕಾಗೆಯದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಜಗತ್ತಿನ ಸರ್ವ ಶ್ರೇಷ್ಠ ಕಥೆಗಳು ಎಂದು ಪರಿಗಣಿಸಲಾದ ಬುದ್ಧ ಅಮರ ಜಾತಕ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಜೀವನ ಸಾರ್ಥಕತೆಗೆ ಆಸೆ ಎಷ್ಟು ಬೇಕು? ಯಾವುದಕ್ಕೆ ಆಸೆ ಪಡಬೇಕು. ಯಾವ ಆಸೆಯು ಬದುಕನ್ನು ಪ್ರಪಾತಕ್ಕೆ ತಳ್ಳುತ್ತದೆ. ಯಾವುದು ಅಭಿವೃದ್ಧಿಯತ್ತ ಕೊಂಡೊಯ್ಯತ್ತದೆ ಇವೇ ಮುಂತಾದ ಚಿಂತನೆಗಳು ಇಲ್ಲಿ ಚರ್ಚೆಗೆ ಇಂಬು ನೀಡುತ್ತವೆ. ಈ ಕೃತಿಯು 19 ಶೀರ್ಷಿಕೆಗಳನ್ನು ಒಳಗೊಂಡಿದ್ದು ಪೂಜ್ಯರಲ್ಲದವನಿಗೆ ನಮಿಸಿದೊಡೆ ಕೇಡು ಖಚಿತ, ಯಾರು ಅರ್ಹರು ಈ ಹೂಮಾಲೆ ಮುಡಿಯಲು, ಉಂಡೆದ್ದರು ಪತ್ನಿಯ ಶವದ ಮುಂದೆ, ಜ್ಞಾನಿಗಳಿಗೇಕೆ ಭವಿಷ್ಯ ಕಾಣುತ್ತದೆ, ನಮಗೆ ಎಷ್ಟು ಆಸೆ ಬೇಕು, ಹಿಡಿದವನು ದುಃಖಿ ಬಿಟ್ಟವನು ಸುಖಿ, ಬೋದಿಸತ್ವರೇ ಇದೇನು?, ರಾಜ ದೂರು ಎಂದಿಗೂ, ಪೂರ್ಣಸತ್ಯವಲ್ಲ, ಸುಟ್ಟ ಉಡವು ಓಡಿ ಹೋದರೆ ಮಾಡುವುದೇನು?, ರಜನೆ ಸಿಹಿ ಕಹಿಯ ಮೂಲ, ಸಮರಲ್ಲದವರಲ್ಲಿ ಸಮರ ತರವೆ?, ಹುಲ್ಲೆಂದು ಹುಯಿಲೆಬ್ಬಿಸಿ ಕರ್ಮವ ಕಡೆಗಣಿಸದಿರು, ನಾನು ಆಸಕ್ತನಲ್ಲ ಆದರೆ ವಿತರ್ಕ, ಒಂದರಂತ್ಯ ಮತ್ತೊಂದರಲ್ಲಿ ನೋಡಾ, ನವಿಲ ಕಂಡನಗೆ ಕಾಗೆಯ ಹಂಗೇಕೆ, ಹುಲ್ಲು ಮಾರಿ ದಾನವೇಕೆ ಮಾಡುವೆ, ದೇವರೆಂದರೆ ನೋಡದ ಹೆಣ್ಣ ಪ್ರೀತಿಸಿದಂತೆ, ನಿಮಗೇನು ಬೇಕು, ದೊರೆ ಎಂದರೆ ಹೇಗಿರಬೇಕು ಎಂಬವುಗಳನ್ನು ಒಳಗೊಂಡಿದೆ. 

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books