ನಮ್ಮ ಗಿರಡ್ಡಿ ಸsರ್

Author : ಶ್ಯಾಮಸುಂದರ ಬಿದರಕುಂದಿ

Pages 218

₹ 100.00




Year of Publication: 2019
Published by: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
Address: ಆರ್‌. ಎನ್. ಶೆಟ್ಟಿ ಕ್ರೀಡಾಂಗಣ ಹತ್ತಿರ, ಧಾರವಾಡ-580008

Synopsys

ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ನುಡಿನಮನ ಸಲ್ಲಿಸಿದ ಕೃತಿ ’ನಮ್ಮ ಗಿರಡ್ಡಿ ಸsರ್’ . ಈ ಕೃತಿಯನ್ನು ಶ್ಯಾಮಸುಂದರ ಬಿದರಕುಂದಿ ಹಾಗೂ ಲಕ್ಷ್ಮೀಕಾಂತ ಇಟ್ನಾಳ ಸಂಪಾದಿಸಿದ್ದು, ಗಿರಡ್ಡಿ ಅವರ ಒಡನಾಡಿಗಳಾದ ಜಿ.ಎಸ್.ಆಮೂರ, ಚೆನ್ನವೀರ ಕಣವಿ, ಚಂದ್ರಶೇಖರ ಪಾಟೀಲ (ಚಂಪಾ), ಸಿದ್ಧಲಿಂಗ ಪಟ್ಟಣಶೆಟ್ಟಿ ಸೇರಿದಂತೆ ನಾಡಿನ ಖ್ಯಾತ ಸಾಹಿತಿ-ಚಿಂತಕರು ಬರೆದಿರುವ ಸುಮಾರು 52 ಲೇಖನಗಳಿವೆ.

ಕೊನೆಗೆ, ಗಿರಡ್ಡಿ (ಗೋವಿಂದರಾಜಪ್ಪ ಅಂದಾನಪ್ಪ ಗಿರಡ್ಡಿ) ಅವರ ಜೀವನ ವಿವರವಿದೆ. ಇಲ್ಲಿಯ ಲೇಖನಗಳು ಗಿರಡ್ಡಿ ಅವರ ವ್ಯಕ್ತಿತ್ವ-ಬರೆಹ-ಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸಿಕೊಡುತ್ತದೆ. ಗಿರಡ್ಡಿ ಕೇವಲ ಚಿಂತಕರಲ್ಲ; ಸಾರ್ವಜನಿಕ ಬದುಕಿನ ಸುಂದರತೆಗಾಗಿ ಅವರ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಲಾಗಿದೆ. ಪ್ರತಿ ಬರೆಹವು ಗಿರಡ್ಡಿಯೊಂದಿಗಿನ ನೆನಪುಗಳನ್ನು ಬಹು ಆತ್ಮೀಯವಾಗಿ ಓದುಗರನ್ನು ತಟ್ಟುತ್ತವೆ.

 

About the Author

ಶ್ಯಾಮಸುಂದರ ಬಿದರಕುಂದಿ
(18 May 1947)

ಕವಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಸದ್ಯ ಹುಬ್ಬಳ್ಳಿ  ನಿವಾಸಿಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್‌.ಡಿ. ಪಡೆದಿರುವ ಅವರು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು.  ಕೃತಿಗಳು: ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು (ಕವನ ಸಂಕಲನ), ಕೃತಿ ನೋಟ, ಅಚ್ಚು ಕಟ್ಟು, ನೆಲೆಗಟ್ಟು, ಪ್ರಸಂಗೋಚಿತ (ವಿಮರ್ಶೆ), ನವ್ಯಮಾರ್ಗದ ಕಾದಂಬರಿಗಳು (ಪಿಎಚ್.ಡಿ. ಮಹಾಪ್ರಬಂಧ), ಗಂಧಕೊರಡು, ಪ್ರಬಂಧಪ್ರಪಂಚ, ಸ್ವಾತಂತ್ರ್ಯದ ಸವಿನೀರು, ಕರ್ಕಿಯವರ ಸಮಗ್ರ ಸಾಹಿತ್ಯ ( ಸಂಪಾದಿತ), ಗರೂಡ ಶ್ರೀಪಾದರಾವ; ಶಂಕರ ಮೊಕಾಶಿ ಪುಣೇಕರ; ಫ.ಶಿ. ಭಾಂಡಗೆ (ಇತರೆ) ...

READ MORE

Related Books