ನಮ್ಮ ಮಾತೃಭೂಮಿ

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 73

₹ 10.00




Year of Publication: 2010

Synopsys

ಭಾರತದ ಜನತೆಯಲ್ಲಿ ಧರ್ಮವು ಹೇಗೆ ಹಾಸುಹೊಕ್ಕಾಗಿದೆ , ಈ ದೇಶವು ಎಲ್ಲಾ ಧರ್ಮಗಳಿಗೂ ಹೇಗೆ ಆಶ್ರಯವನ್ನು ನೀಡಿದೆ , ಸರ್ವಧರ್ಮಸಮ ಭಾವ ಇಲ್ಲಿ ಹೇಗೆ ಮೂಡಿದೆ , ಆಧ್ಯಾತ್ಮಿಕತೆ ಇಲ್ಲಿ ಹೇಗೆ ಜೀವನದ ಉಸಿರಾಗಿದೆ , ಕೆಲವು ಕಾಲ ಮಂಕಾಗಿದ್ದ ಹಿಂದೂ ಧಾರ್ಮಿಕ ಭಾವನೆಗಳು ತಮ್ಮ ಪೊರೆಯನ್ನು ಕಳಚಿಕೊಂಡು ಪ್ರಕಾಶಮಾನವಾಗಿ ಶೋಭಿಸಲು ಹೇಗೆ ಪ್ರಾರಂಭಿಸಿವೆ , ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ .

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books