ನಮ್ಮ ಸಮಾಜವಾದಿಗಳು

Author : ಡಿ.ಎಸ್.ನಾಗಭೂಷಣ

Synopsys

ಡಿ.ಎಸ್.ನಾಗಭೂಷಣ ಅವರು ಕರ್ನಾಟಕದ ಸಮಾಜವಾದಿಗಳ ಪರಿಚಯವನ್ನು ಸಂಪಾದಿಸಿ ಪ್ರಕಟಿಸಿರುವ ಕೃತಿ ನಮ್ಮ ಸಮಾಜವಾದಿಗಳು. ಕೃತಿಯಲ್ಲಿ ಲೇಖಕರೇ ಬರೆದಿರುವಂತೆ, ನಿಜ, ಈ ಸಮಾಜವಾದಿಗಳಲ್ಲಿ ಹಲವರು ಮುಖ್ಯವಾಗಿ ಎರಡನೇ ತಲೆಮಾರಿನವರು ರಾಜಕೀಯ ಭ್ರಷ್ಟತೆಯ ಸುಳಿಗೆ ಸಿಕ್ಕರು. ಅದಕ್ಕೆ ಮತ್ತೆ ಅವರ ವೈಯಕ್ತಿಕ ದೌರ್ಬಲ್ಯಗಳಷ್ಟೇ ಸಮಾಜವಾದವನ್ನು ತಾತ್ವಿಕ ಸ್ಕೂಲತೆಯಿಂದ ಕಾಪಾಡಲಾಗದ ಆದರ ಮೊದಲ ತಲೆಮಾರಿನವರ- ಮೇಲೆ ತಿಳಿಸಿದ ಕಾಂಗ್ರೆಸ್ ಯಜಮಾನಿಕೆಯ ರಾಜಕೀಯ ಪ್ರಧಾನ ಧಾರೆಯ ದಟ್ಟ ಪ್ರಭಾವದಿಂದಾಗಿಯೋ ಏನೋ- ರಾಜಕೀಯ ಅಸಹಾಯಕತೆಯ ಕಾರಣವಾಗಿರಬಹುದು. ಇದ ರಿಂದಾಗಿ ಸಮಾಜವಾದ ಮತ್ತು ಸಮಾಜವಾದಿ ಎಂಬ ಎರಡು ಶಬ್ದಗಳೂ ಜನತೆಯ ಮನಸ್ಸಿನಲ್ಲಿ ಅನುಮಾನಾಸ್ಪದ ಶಬ್ದಗಳಾದವು. ಆದರೆ ಈ ಅನುಮಾನಾಸ್ಪದೆತೆಗೆ ಈ ಎರಡೂ ಶಬ್ದಗಳಲ್ಲಿ ಕಾರಣವಿಲ್ಲ ಎಂಬುದನ್ನು ಶೃತಪಡಿಸುವ ಒಂದು ಪ್ರಯತ್ನವಾಗಿ ಈ ಸಂಕಲನವನ್ನು ಸಂಪಾದಿಸಿ ನೀಡುವ ಪ್ರಯತ್ನ ಮಾಡಲಾಗಿದೆ. ಸಮಾಜವಾದ ಮತ್ತು ಸಮಾಜವಾದಿ ಎಂಬ ಶಬ್ದಗಳ ನಿಜವಾದ ಘನತೆ ಮತ್ತು ಗೌರವವಗಳನ್ನು ಎತ್ತಿಹಿಡಿಯುವ, ಅಗತ್ಯವಿದೆಡೆ ಅವನ್ನು ವಿಮರ್ಶೆಗೆ ಈಡು ಮಾಡುವಂತಹ ಬರಹಗಳು ಇಲ್ಲಿವೆ ಎಂಬುದಾಗಿ ಹೇಳಿದ್ದಾರೆ.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Related Books