ನಮ್ಮೊಳಗಿನ ದುಂದುಮಾರ

Author : ನಾಗೇಶ ಹೆಗಡೆ

Pages 154

₹ 120.00




Year of Publication: 2012
Published by: ಭೂಮಿ ಬುಕ್ಸ್
Address: 150, ಮೊದಲ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560020
Phone: 9449177628

Synopsys

‘ದುಂದುಮಾರ’ ನಾಗೇಶ ಹೆಗಡೆಯವರ ಲೇಖನ ಸಂಕಲನ. ಈ ಕೃತಿಯ ಬಗ್ಗೆ ಬರೆಯುತ್ತಾ ನಾಗೇಶ ಹೆಗಡೆಯವರು ವಿಶೇಷ ಕಥೆಯೊಂದನ್ನ ನೆನಪಿಸಿಕೊಳ್ಳುತ್ತಾರೆ. ಅದೇಂನೆಂದರೆ ಬ್ರಹ್ಮ ಪುರಾಣದಲ್ಲಿ ಒಂದು ಕತೆ ಬರುತ್ತದೆ. ನೆಲದೊಳಗೆ ದುಮ್ ದುಮ್ ಹೆಸರಿನ ಒಬ್ಬ ದೈತ್ಯನಿದ್ದಾನೆ. ಆತ ಚಲಿಸಿದರೆ ಭೂಕಂಪನವೇ ಆಗುತ್ತದೆ. ಫೂತ್ಕರಿಸಿದರೆ ಜ್ವಾಲಾಮುಖಿಯೇ ಚಿಮ್ಮುತ್ತದೆ. ಋಷಿಮುನಿಗಳು ಈ ದೈತ್ಯನ ವಿಲಕ್ಷಣ ಶಕ್ತಿಯ ಬಗ್ಗೆ ಕುವಲಯಾಶ್ವ ಹೆಸರಿಗೆ ರಾಜನಿಗೆ ವರದಿ ಮಾಡುತ್ತಾರೆ. 

ರಾಜ ಈ ಭೂಗತ ದೈತ್ಯನ ಬಗ್ಗೆ ಅಚ್ಚರಿಪಟ್ಟು ಸುಮ್ಮನಿರಬೇಡವೆ.ದೈತ್ಯನನ್ನು ಹೊರಕ್ಕೆಳೆಯುವಂತೆ ತನ್ನ ನೂರು ಮಕ್ಕಳಿಗೆ ಆಜ್ಞಾಪಿಸುತ್ತಾನೆ. ಗುದ್ದಲಿ, ಸನಿಕೆಗಳ ಗದ್ದಲ ಕೇಳಿ ಹೊರಬಂದ ರಾಕ್ಷಸ ತನ್ನ ಶಾಂತಿಭಂಗ ಮಾಡಿದ್ದಕ್ಕೆ ಅಬ್ಬರಿಸಿ ಸಿಡಿದೆರಗಿ ರಾಜನ 97 ಮಕ್ಕಳನ್ನು ಹೊಸಕಿ ಹಾಕುತ್ತಾನೆ. ರಾಜ ಧಾವಿಸಿ ಹೋಗಿ ಅಹರ್ನಿಶಿ ಹೋರಾಡಿ ಕೊನೆಗೂ ದೈತ್ಯನನ್ನು ಮಣ್ಣುಮುಕ್ಕಿಸಿ ದುಂದುಮಾರ ಎಂಬ ಬಿರುದು ಗಳಿಸುತ್ತಾನೆ. 

ಇಷ್ಟೆಲ್ಲಾ ಮಾಡಿದ್ದಕ್ಕೆ ರಾಜನಿಗೆ ಸಿಕ್ಕಿದ್ದು ಬರೀ ಬಿರುದು ಮಾತ್ರ. ಈ ಕಥೆ ಸದ್ಯದ ಸ್ಥಿತಿಗೆ ಹೊಂದುತ್ತದೆ ಎನ್ನುತ್ತಾರೆ ಲೇಖಕರು. ಇಂದಿನ ಕಾರ್ಪೊರೆಟ್ ಯುಗದ ಮನುಷ್ಯನದೂ ಅದೇ ಕತೆಯಾಗುತ್ತಿದೆ. ತಮ್ಮ ತೀಟೆ ತೀರಿಸಿಕೊಳ್ಳಲೆಂದು ಭೂಮಿಯೊಳಗಿನ ಏನೇನನ್ನೆಲ್ಲ ಹೊರಕ್ಕೆಳೆದು ಹೊಸಕಿ ಹಾಕುತ್ತ ಜೀವಲೋಕಕ್ಕೆ ಪ್ರಳಯಾಂತಕನಾಗುತ್ತಿರುವ ಸತ್ಯಕತೆಗಳು ಈ ಕೃತಿಯಲ್ಲಿವೆ. 

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books