ನಮ್ಮೂರ ಜಾನಪದ ಅನುಸಂಧಾನ

Author : ರವಿರಾಜ್ ಸಾಗರ್

Pages 124

₹ 130.00




Year of Publication: 2019
Published by: ಹೆಂಬಾಡಿ ಪ್ರಕಾಶನ
Address: ಹೆಂಬಾಡಿ ಪ್ರಕಾಶನ, ರಾಜಾಪುರ, ಕಲಬುರ್ಗಿ
Phone: 9980952630

Synopsys

ಜಾನಪದ ಪಠ್ಯಗಳ ಇಂದಿನ ಕಾಲಕ್ಕೆ ತಕ್ಕಂತೆ ಮರುಸೃಷ್ಟಿಸುವ ಕಲಾತ್ಮಕ ಪ್ರಯೋಗದ ಸಾರಾಂಶವೇ ನಮ್ಮೂರ ಜಾನಪದ ಅನುಸಂಧಾನ. ಶಾಲಾ ಮಕ್ಕಳ ಜನಪದ ಪಠ್ಯ ಅಂತರ್ಗತ ಪ್ರಯೋಗಗಳಿಗಾಗಿ ರಚಿತವಾದ ಕೃತಿಯಾಗಿದೆ. ಶಾಲಾ ಮಕ್ಕಳಿಗೆ ಜನಪದ ಜ್ಞಾನವನ್ನು ಒದಗಿಸುವ ಸಲುವಾಗಿ ತರಗತಿ ಕೋಣೆಯಲ್ಲಿ ಜನಪದ ಕಲಾಂತರ್ಗತ ಪ್ರಯೋಗಗಳನ್ನು ನಡೆಸಲು ಉಪಯುಕ್ತ ಕೃತಿಯಾಗಿದೆ . ಶಾಲಾ ಮಕ್ಕಳ ಕನ್ನಡ ,ಗಣಿತ ಪರಿಸರ ಅಧ್ಯಯನ,ವಿಜ್ಞಾನದ  ಪಠ್ಯ ಅಂಶಗಳನ್ನು, ಒಳಗೊಂಡಂತೆ  ಜನಪದದ ಸರಳ ಶೈಲಿ, ಲಯದಲ್ಲಿ ಜನಪದಗಳನ್ನು ಮರುಸೃಷ್ಟಿ ಸಲಾಗಿದೆ. ಇಂದಿನ ಸಾಂವಿಧಾನಿಕ ಅಶೋತ್ತರಗಳಿಗೆ ಅನುಗುಣವಾಗಿ ಜನರಿಗೆ ವೈಜ್ಞಾನಿಕ ತಿಳುವಳಿಕೆ ಮೂಡಿಸಲು ಜಾನಪದ ಶೈಲಿಯನ್ನು ಉಳಿಸಿಕೊಂಡು ಮರುಸೃಷ್ಟಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಸೋಬಾನೆ ಹಾಡುಗಳನ್ನು ಅಂತರ್ಜಾತಿ ಮದುವೆ ಹಾಡುಗಳನ್ನಾಗಿಯು, ಜಲ ಸಂರಕ್ಷಣೆ, ಪರಿಸರ ಕಾಳಜಿ, ಡೊಳ್ಳಿನ ಪದಗಳು ,ಶೈಕ್ಷಣಿಕ ಅರಿವು ಮೂಡಿಸಲೆಂದೇ ಈ  ಜನಪದಗಳನ್ನು ರಚಿಸಲಾಗಿದೆ.

About the Author

ರವಿರಾಜ್ ಸಾಗರ್
(19 July 1986)

ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಕಾಲೇಜು ದಿನಗಳಿಂದಲೇ  ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳು ಹೊರತರುತ್ತಿರುವ ಮಂದಾರ ಕನ್ನಡ ಮಕ್ಕಳ ಪತ್ರಿಕೆಯನ್ನು ಸಂಪಾದಕರು ...

READ MORE

Related Books