ನನ್ನ ಜೊತೆಗಾರರು

Author : ಸಿದ್ದವನಹಳ್ಳಿ ಕೃಷ್ಣಶರ್ಮ

Pages 83




Year of Publication: 1943
Published by: ಸಿದ್ಧವನಹಳ್ಳಿ ಕೃಷ್ಣಶರ್ಮ
Address: ಬೆಂಗಳೂರು

Synopsys

ಮಹಾತ್ಮ ಗಾಂಧೀಜಿ ಅವರು ತಮ್ಮ ಜೊತೆಗಾರರ ಬಗ್ಗೆ ಬರೆದಿದ್ದದನ್ನು ಲೇಖಕ ಸಿದ್ಧವನಮಹಳ್ಳಿ ಕೃಷ್ಣಶರ್ಮರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ನನ್ನ ಜೊತೆಗಾರರು. ಮಗನಲಾಲ್ ಗಾಂಧೀ, ಲಾಲಾ ಲಜಪತರಾಯ್, ವಿನೋಬಾ ಭಾವೆ, ಕಿಶೋರಿ ಲಾಲ್, ದೀನಬಂಧು, ಹಕೀಂ ಸಾಹೇಬ ಅಜಮಲಖಾನ್, ಸುರೇಂದ್ರನಾಥ ಬ್ಯಾನರ್ಜಿ, ಆಶ್ರಮ ಭಜನೆ, ಸೇಠ್ ಜಮನಾಲಾಲ್ ಬಜಾಜ್, ಮಹಾತ್ಮ ಮುನಷಿ ರಾಮ, ಛೋಟೇಲಾಲ ಜೈನ್, ರಾಯಚಂದ್ ಭಾಯಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರೂ ತಮ್ಮ ವ್ಯಕಿತ್ವದಿಂದ ಗಾಂಧೀಜಿಯ ಮೇಲೆ ಪರಿಣಾಮ ಬೀರಿದವರು. ಇಂತಹವರ ಚರಿತ್ರೆಯೂ ಸೇರಿದಂತೆ ಈ ಮಹನೀಯರ ಬಗ್ಗೆ ಗಾಂಧೀಜಿ ಬರೆಯಲು ಕಾರಣಗಳೂ ಸಹ ಈ ಕೃತಿಯಲ್ಲಿ ಅಡಕವಾಗಿವೆ. ಒಬ್ಬೊಬ್ಬರ ಚರಿತ್ರೆಯು ಮಾದರಿಯಾಗಿದೆ.

About the Author

ಸಿದ್ದವನಹಳ್ಳಿ ಕೃಷ್ಣಶರ್ಮ
(31 July 1904 - 02 October 1973)

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...

READ MORE

Related Books