ನನ್ನೂರು

Author : ಸಿ.ಕೆ ನಾವಲಗಿ

Pages 137

₹ 89.00




Year of Publication: 2008
Published by: ಕನಕ ಸಾಹಿತ್ಯ ಪ್ರತಿಷ್ಠಾನ
Address: ಸಂಜೀವಿನಿ ನಗರ, ಹೆಗ್ಗನಹಳ್ಳಿ, ಬೆಂಗಳೂರು

Synopsys

ವಿವಿಧ ಲೇಖಕರ ಕುರಿತು ಲೇಖಕ ಡಾ. ಸಿ.ಕೆ. ನಾವಲಗಿ ಅವರು ಬರೆದಿರುವ ಲೇಖನಗಳ ಸಂಕಲನ-ನನ್ನೂರು. ಸೃಷ್ಟಿ ಸೌಂದರ್ಯದ ನೆಲೆ ಗೋಕಾವಿ, ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕ ನಮ್ಮೂರ ಜಾತ್ರೆ, ಕರ್ನಾಟಕ ಸಂಘ ಗೋಕಾಕ- ಒಂದು ಪರಿಚಯ, ವರ್ತಕಭೂಷಣ ದಿ. ಶ್ರೀಧೋಂಡಿಬಾ ಅಣ್ಣ ಜಾಧವ, ಅಪ್ಪಟ ಗಾಂಧೀವಾದಿ ಗೋಕಾಕದ ಎ.ಆರ್‌ ಪಂಚಗಾವಿ, ಸಾಂಸ್ಕೃತಿಕ ಲೋಕದ ರಾಯಭಾರಿ ಶ್ರೀ ಸತೀಶ ಜಾರಕಹೊಳಿ, ವಿಜಯಶ್ರೀ ಪ್ರಶಸ್ತಿ ವಿಜೇತ ಡಾ.ಎ.ಆರ್‌. ಕಡಕೋಳ, ಸಂತ ಶಿಶುನಾಳ ಶರೀಫ ಪ್ರಶಸ್ತಿ ಪುರಸ್ಕೃತ ಶ್ರೀ ಈಶ್ವರಪ್ಪ ಮಿಣಚಿ, ಬಣ್ಣಕ್ಕೆ ಜೀವ ತುಂಬುವ ಭೀಮರಾವ ಮುರಗೋಡ, ಹೆಸರಾಂತ ರಂಗನಟಿ ಮಾಲತೀ ಶ್ರೀ ಮೈಸೂರು, ಸಂಗೀತ ಕಲಾವಿದ ಜಿ.ಕೆ. ಕಾಡೇಶ, ಬಹುಮುಖ ವ್ಯಕ್ತಿತ್ವದ ಎಲ್‌,ಎಸ್, ಶಾಸ್ತ್ರಿ, ಸಿದ್ಧಜ್ಞಾನ ಯೋಗಾಶ್ರಮದ ಸಿದ್ಧರಾಮೇಶ್ವರರ ಕುರಿತು ಚಿತ್ರಣಗಳನ್ನು ಕಟ್ಟಿಕೊಡಲಾಗಿದೆ. 

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books