ನಾನು ಮತ್ತು ನಮ್ಮವರು

Author : ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)

Pages 52

₹ 5.00




Year of Publication: 1983
Published by: ಶಾರದಾಸುತ ಪ್ರಕಾಶನ, ಬೀದರ

Synopsys

'ನಾನು ಮತ್ತು ನಮ್ಮವರು'   ಕವನ ಸಂಕಲನವು  ರಾಜ್ಯದ 10 ಉದಯೋನ್ಮುಖ ಯುವ ಕವಿಗಳ ಸಂಯುಕ್ತ ಸಂಕಲನ. ಮೊದಲನೆಯ ಭಾಗದಲ್ಲಿ ಬಸವರಾಜ ಮಠಪತಿ ಅವರ ಕವನಗಳಿವೆ. ಎರಡನೆಯ ಭಾಗದಲ್ಲಿ ವಿವಿಧ ಕವಿಗಳ ತಲಾ ಅವರ 2-3 ಕವನ  ಪ್ರಕಟಿಸಲಾಗಿದೆ. ಸಂಪಾದಕ ಬಸವರಾಜ ಮಠಪತಿ ಅವರೇ ತನ್ನದೇ  ವೆಚ್ಚದಲ್ಲಿ ಪ್ರಕಟಿಸಿದ್ದರು.  ನಾನು ಮತ್ತು ನಮ್ಮವರು ಸಂಕಲನ ಹಿರಿಯ ಸಾಹಿತಿ  ವೀರೇಂದ್ರ ಸಿಂಪಿ ಬಿಡುಗಡೆ ಮಾಡಿ ’ಬೀದರ್ ನ ಪ್ರಥಮ ಕವನ ಸಂಕಲನ’ ಎಂದಿದ್ದರು. ಕನ್ನಡ ನುಡಿ ಪತ್ರಿಕೆಯಲ್ಲಿ ಸಂಕಲನದ ಪೂರ್ಣ ವಿಮರ್ಶೆ ಪ್ರಕಟವಾಗಿದೆ.

About the Author

ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)
(01 June 1954)

’ಕ್ಷಿತಿಜ್ ಬೀದರ್‌’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ  ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ  (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...

READ MORE

Related Books