ನಾರದ

Author : ಎನ್. ರಂಗನಾಥಶರ್ಮಾ

Pages 107

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು.

Synopsys

`ನಾರದ' ಪುರಾಣ ಪುರುಷರ ಬದುಕಿನ ಈ ಕೃತಿಯನ್ನು ಲೇಖಕ ಎನ್.‌ ರಂಗನಾಥಶರ್ಮಾ  ರಚಿಸಿದ್ದಾರೆ. ದೇವರ್ಷಿ. ಒಳ್ಳೆಯವರಿಗೆ ನೆರವಾಗಲಿ, ದುಷ್ಟರಿಗೆ ಶಿಕ್ಷೆಯಾಗಲಿ ಎಂದು ಮೂರು ಲೋಕಗಳನ್ನೂ ಸುತ್ತುತ್ತ, ಸುತ್ತುವಾಗಲೇ ಭಗವಂತನ ನಾಮಸ್ಮರಣೆ ಮಾಡುತ್ತ ತಪಸ್ಸು ನಡೆಸುವ ಲೋಕೋಪಕಾರಿ. ಹಲವು ಭಕ್ತರಿಗೆ ದಾರಿ ತೋರಿಸಿದ್ದಾನೆ. ನಾರದ .ಮಹರ್ಷಿಯ ಬಗೆಗೆ ಗೊತ್ತಿರದ ವ್ಯಕ್ತಿ ಭೂಮಿ ಮೇಲಿರಲಾರ. ಸದಾ ನಾರಾಯಣನ ಜಪದಲ್ಲೇ ತ್ರಿಲೋಕವನ್ನು ಸುತ್ತುವ ಈತ, ಜಗತ್ತಿನ ಒಳಿತಿಗಾಗಿ ಮಿಡಿದ ಸನ್ಯಾಸಿ ಎಂದು ಕೃತಿಯಲ್ಲಿ ವಿವರಿಸಲಾಗಿದೆ.

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books