ನಾಟ್ಯಾಚಾರ್ಯ ಕುಮಾರ ವೆಂಕಣ್ಣ

Author : ಪರಂಜ್ಯೋತಿ (ಕೆ.ಪಿ. ಸ್ವಾಮಿ)

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ  'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 232ನೇ ಪುಸ್ತಕ ನಾಟ್ಯಾಚಾರ್ಯ ಕುಮಾರ ವೆಂಕಣ್ಣ. ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ನಾಟ್ಯಾಚಾರ್ಯ ಕುಮಾರ ವೆಂಕಣ್ಣ ಕುಮಾರ ವೆಂಕಣ್ಣ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ವೆಂಕಟ್ರಾವ್ ಕ್ಯೂಲೋರ್ಕರ್ (೧೯೧೬-೧೯೯೪) ಬಂಟ್ವಾಳದ ಬಳಿಯ ಕ್ಯೂಲದವರು. 'ಬಣ್ಣದ ಮಾಲಿಂಗ', 'ಗ್ಯಾಸ್ ಬಸ್', “ಕಲ್ಯಾಣಿ', 'ನಾಗವಲ್ಲಿ', 'ಪ್ರಣಯ ಪಕ್ಷಿ', 'ನಾಟ್ಯ ಸರಸ್ವತಿ', 'ಪ್ರೇಮ ಜಾಲ', 'ಬಣ್ಣದ ಬದುಕು', 'ಬೀದಿಯ ದೀಪ', 'ಮಾಯಾ', “ಹರಿದ ಗೆಜ್ಜೆ' ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ ಪ್ರಗತಿಶೀಲ ಲೇಖಕ ಕುಮಾರ ವೆಂಕಣ್ಣ ವಿದ್ಯಾರ್ಥಿ ದೆಸೆಯಲ್ಲಿಯೇ ಕವಿತೆ, ಕತೆ, ಲೇಖನಗಳನ್ನು ಬರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅವರು ನಂತರ ಬೆಂಗಳೂರಿನಲ್ಲಿ ಪತ್ರಕರ್ತರಾಗಿ, 'ಸ್ವತಂತ್ರ ಕರ್ನಾಟಕ', 'ಉಷಾ', 'ವಿಶ್ವ ಕರ್ನಾಟಕ' ಪತ್ರಿಕೆಗಳ ಸಂಪಾದಕೀಯ ಬಳಗದಲ್ಲಿ ಕೆಲಸ ಮಾಡಿದ್ದರು. ನಾಟ್ಯ ಕಲಾವಿದರೂ ಕಲಾ ಚಿಂತಕರೂ ಆಗಿದ್ದ ಅವರಿಗೆ 'ನಾಟ್ಯಾಚಾರ್ಯ' ಎಂಬ ಬಿರುದು ಸಂದಿತ್ತು.

About the Author

ಪರಂಜ್ಯೋತಿ (ಕೆ.ಪಿ. ಸ್ವಾಮಿ)
(10 June 1936 - 04 July 2019)

ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು.  ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...

READ MORE

Related Books