ಹದಿನಾರು ಸಂಪುಟಗಳಲ್ಲಿ ಪ್ರಕಟಿಸಲು ಉದ್ದೇಶಿಸಿದ್ದ ಡಾ.ವಿನಾಯಕ ಕೃಷ್ಣ ಗೋಕಾಕರ ಸಮಗ್ರ ಸಾಹಿತ್ಯ ಮಾಲೆಯ ಒಂದನೆಯ ಸಂಪುಟ ಕೃತಿ ’ನವೋದಯ ಕಾವ್ಯ ಭಾಗ ಒಂದು’.
ಈ ಕೃತಿಯಲ್ಲಿ ಪಯಣ, ಕಲೋಪಾಸಕ, ತ್ರಿವಿಕ್ರಮರ ಆಕಾಶಗಂಗೆ, ಹಿಗ್ಗು ಸಂಕಲನಗಳಲ್ಲದೆ ಅನೇಕ ಸುನೀತಗಳು ಸೇರಿವೆ. ವಿನಾಯಕ ಎಂಬ ಕಾವ್ಯನಾಮದಲ್ಲಿ ಪ್ರಸಿದ್ಧವಾಗಿರುವ ಡಾ. ಗೋಕಾಕರು ಹೊಸಗನ್ನಡ ಸಾಹಿತ್ಯವನ್ನು ನಿರ್ಮಿಸಿದ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಕನ್ನಡದಲ್ಲಿ ನವ್ಯ ಪ್ರವೃತ್ತಿಯನ್ನು ಆರಂಭಿಸಿದವರೇ ಅವರು. ಅವರ ಸಮುದ್ರ ಗೀತೆಗಳು ಕನ್ನಡ ಕಾವ್ಯಕ್ಕೆ ಹೊಸ ಮೆರುಗನ್ನು ಬೆರಗನ್ನೂ ತಂದಿತು. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸಕಥನ, ಪ್ರಬಂಧ ಮೊದಲಾಗಿ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೆಲಸ ಮಾಡಿದ ಗೋಕಾಕರು ಖ್ಯಾತರೆನ್ನಿಸಿದ ಭಾರತೀಯ ಇಂಗ್ಲೀಷ್ ಲೇಖಕರಲ್ಲಿಯೂ ಒಬ್ಬರಾಗಿದ್ದಾರೆ.
©2024 Book Brahma Private Limited.