ಈ ಕಾದಂಬರಿಯು ಭಾರತದ ರಾಜಕೀಯ ಮತ್ತು ಸಾರ್ವಜನಿಕ ರಂಗದಲ್ಲಿ ಬದಲಾವಣೆಗೊಂಡ ಬದುಕಿನ ಮೌಲ್ಯಗಳ ಬಗ್ಗೆ ವಿಶೇಷ ದೃಷ್ಟಿ ಹರಿಸಿದ ಕಥಾನಕ. ಸ್ವಾರ್ಥಸಾಧನೆಯೇ ಮುಖ್ಯ ಗುರಿಯಾಗಿದ್ದ ರಾಜಕೀಯ ಕುತಂತ್ರಗಳನ್ನು, ಶಕುನಿಗಳಾಗಿದ್ದ ಸ್ಥಳೀಯ ಪುಡಾರಿಗಳು ದೇಶ ಸೇವೆ, ಜನಸೇವೆಗಳ ನೆಪದಿಂದ ಆಡಿತ್ತಿರುವ ನಾಟಕಗಳನ್ನು, ಹೂಡುತ್ತಿರುವ ಕುತಂತ್ರಗಳನ್ನು ಕುರಿತು ಚಂಪಲಾಪುರ ಹಳ್ಳಿಯಲ್ಲಿ ಹುಟ್ಟಿ, ಮುಂಬಯಿಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತಿದ್ದ ರಂಗಣ್ಣ ತನ್ನ ಗೆಳೆಯನಿಂದ ತಿಳಿದುಕೊಳ್ಳುತ್ತಾನೆ. ಕಪಟ ರಾಜಕಾರಣಿಗಳ ಸೋಗನ್ನು ಕಂಡ ಬಳಿಕವೂ, ಪ್ರಜೆಗಳು ಅಲ್ವ ಸ್ವಾರ್ಥಕ್ಕಾಗಿ ಅಂಥವರನ್ನೇ ಚುನಾವಣೆಗಳಲ್ಲಿ ಗೆಲ್ಲಿಸಿ, ಅಂಥವರೊಡನೆ ಒಂದಿಲ್ಲೊಂದು ಬಗೆಯಲ್ಲಿ ಶಾಮೀಲಾಗಿ ತಮ್ಮ ಕಾರ್ಯಸಾಧನೆಯನ್ನು ಮಾಡಿಕೊಳ್ಳುವ ಚಿತ್ರವನ್ನೂ ರಂಗಣ್ಣ ಚಂಪಲಾಪುರದಲ್ಲಿ ನೋಡುತ್ತಾನೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಹಕ್ಕುಗಳಿಗಾಗಿಯೇ ಚಳುವಳಿಯನ್ನು ಹೋಡುತ್ತಿರುವ ದೃಶ್ಯವನ್ನು ಅವನು ಕಾಣುತ್ತಾನಲ್ಲದೆ, ಯಾರೋಬ್ಬರೂ ತಮ್ಮ ಕರ್ತವ್ಯದ ಕಡೆಗೆ, ಇತರರಿಗೆ ತಮ್ಮಿಂದಾಗಬಹುದಾದ ಅನಾನುಕೂಲತೆ, ತೊಂದರೆಗಳ ಬಗ್ಗೆ ಯೋಚನೆಯನ್ನೇ ಮಾಡದ ಸ್ಥಿತಿಗತಿಗಳನ್ನು ಕಣ್ಣಾರೆ ಕಾಣುತ್ತಾನೆ. ಇಂಥವರ ಎಡೆಯಲ್ಲಿ ದೇವೇಂದ್ರಪ್ಪನಂಥ ಪ್ರಾಮಾಣಿಕ ರಾಜಕಾರಣಿ ತನ್ನ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವುದಲ್ಲದೇ, ಇಂಥ ದುಸ್ಥಿತಿಗಾಗಿ ಕಣ್ಣೀರು ಸುರಿಸುವುದನ್ನೂ ಅವನು ನೋಡುತ್ತೇನೆ. ಕೊನೆಯ ಪಕ್ಷ ಇಂಥ ಮಾತುಗಳನ್ನು ಹೇಳಲು ಹಕ್ಕುಳ್ಳ ಒಬ್ಬರಾದರೂ ಉಳಿದಿದ್ದಾರೆ ಎಂಬ ಸಂತೋಷಪಟ್ಟುಕೊಳ್ಳುವ ಭಾಗ್ಯ ತನಗೆ ದೊರೆತುದಕ್ಕಾಗಿ ಸಮಾಧಾನ ತಾಳುತ್ತಾನೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE