ನೀಲಿ ಗ್ರಾಮ

Author : ವಿ.ಆರ್. ಕಾರ್ಪೆಂಟರ್

Pages 150

₹ 130.00




Year of Publication: 2012
Published by: ಸಂಸ್ಕೃತಿ ಪ್ರಕಾಶನ
Address: ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಆದರ್ಶ ಕಾಲೋನಿ, ಕಂಟೋನ್ಮೆಟ್, ಬಳ್ಳಾರಿ- 583104
Phone: 9448323400

Synopsys

ವಿ.ಆರ್. ಕಾರ್ಪೆಂಟರ್ ಅವರ ಕಾದಂಬರಿ ‘ನೀಲಿ ಗ್ರಾಮ’. ವಿಜಯ ನೆಕ್ಟ್ಸ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ನೀಲಿ ಗ್ರಾಮ ಕಾದಂಬರಿ ಕಾರ್ಪೆಂಟರ್ ಅವರ ಜನಪ್ರಿಯ ಕಾದಂಬರಿ. ತನ್ನ ದಿನನಿತ್ಯದ ಬದುಕಿನಲ್ಲೂ ಬಂಡಾಯಗಾರನಾಗಿ ಕಾಣುವ ವಿ.ಆರ್.ಕಾರ್ಪೇಂಟರ್ ನೀಲಿಗ್ರಾಮದಂಥ ಫ್ಯಾಂಟಸಿ ಕಾದಂಬರಿಯನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಗೆರಿಲ್ಲಾ ಬರಹಗಾರನಾಗಿ ಗೋಚರಿಸಿದ್ದಾರೆ.

ಈ ಕೃತಿಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಹಿರಿಯ ಕವಿ ಸುಬ್ಬು ಹೊಲೆಯಾರ್, ನೀಲಿಗ್ರಾಮದ ಓದುಗರಿಗೆ ಕಲ್ಪನಾಲೋಕವನ್ನೆ ಪರಿಚಯಿಸುತ್ತಿರುವ ವಿ.ಆರ್.ಕಾರ್ಪೇಂಟರ್ ಮುಖಾಂತರ ಕನ್ನಡಕೊಬ್ಬ ಹಾರಿಪಾಟರ್ ಸಿಕ್ಕಂತಾಗಿದೆ ಎಂದು ಪ್ರಶಂಸಿದ್ದರು.

About the Author

ವಿ.ಆರ್. ಕಾರ್ಪೆಂಟರ್
(28 May 1981)

ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...

READ MORE

Reviews

(ವಿಮರ್ಶೆ ಹೊಸತು ಏಪ್ರಿಲ್ 2023)

ಪಯಣವೆನ್ನುವುದು ಪಯಣಿಗನ ಆಸಕ್ತಿ, ಅಭಿರುಚಿಗಳಿಗೆ ತಕ್ಕಂತೆ ಭಿನ್ನ ಭಿನ್ನ ಅನುಭವಗಳನ್ನು ಕೊಡುತ್ತದೆ. ದಿಕ್ಕು-ದೆಸೆ ಇಲ್ಲದ ಸಂಚಾರವೂ ಸಹ ನಿರೀಕ್ಷಿಸದ ಅನುಭವಗಳನ್ನು ಕಟ್ಟಿ ಕೊಡುವುದು೦ಟು. `ಕಾರ್ಪೆಂಟರ್ 'ನೀಲಿಗ್ರಾಮ' ಕಾದ೦ಬರಿಯಲ್ಲಿನ ಪಯಣ ಪ್ರಕ್ರಿಯೆ ನಯವೂ ಹೌದು, ಚಾರಣವೂ ಹೌದು, ಶೋಧವ ಹೌದು ಹಾಗೂ ಪಲಾಯನವೂ ಹೌದು, ಇಲ್ಲಿನ ನಿರೂಪಣೆ, ಕಥಾಹಂದರ ಇ೦ರ ದಶಕದ ನಷ್ಟ ಕಾದಂಬರಿಗಳನ್ನು ನೆನಪಿಸುತ್ತದೆ. ಭ್ರಮೆ, ಕಲ್ಪನ, ಕನಸು, ಭಯ, ಅವಾಸ್ತವ ಸಂಗತಿಗಳೇ ಕಾದ೦ಬರಿಯಲ್ಲಿ ತುಂಬಿಕೊಂಡು ಗೊಂದಲ-ಗೋಜನ್ನುಂಟು ಮಾಡುತ್ತವೆ. ಮನುಷ್ಯನ ಅಪ್ರಭಾವರ್ವಕ ಸ್ಥಿತಿಯ ಅಸಂಗತ ಅಂಶಗಳು, ವಾಸ್ತವ ಸಂಗತಿಗಳೊಂದಿಗಿನ ಸಂಘರ್ಷ ಕಾದಂಬರಿಯ ಸ್ವರೂಪವನ್ನು ಪಡೆದಿವೆ. ಲೇಖಕನ ಆತ್ಮಚರಿತ್ರೆಯ ದಾಟಿಯ ಗೀಳು ಇಲ್ಲಿಯೂ ಇಬಕಿ ನೋಡಿದೆ. ಕಾದಂಬರಿಯ ಗೋಜುಗಳು ಸ್ವಸ್ಥ ಸಮಾಜದ ಕನಸು ಕಾಣುತ್ತಿರುವ ಪ್ರಜ್ಞಾವಂತ ಸಮುದಾಯ ತಲುಪಿರುವ ಸ್ಥಿತಿಗೆ ಸಂಕೇತದಂತಿದೆ. ನಗರಗಳನ್ನು, ಜಾತಿ- ಧರ್ಮಗಳನ್ನು ಮಠ-ಮಾನ್ಯ ಗಳನ್ನು, ಚುನಾವಣೆಗಳನ್ನು ಕೇಂದ್ರವಾಗಿಟ್ಟುಕೊಂಡ ಅಭಿವೃದ್ಧಿಯ ಮಾದರಿಗಳು, ಅವಶೇಷ ವಾಗುತ್ತಿರುವ ಗ್ರಾಮ ಭಾರತ, ಉಳ್ಳವರ ಭ್ರಷ್ಟರ ಮುಖವಾಡವಾಗುತ್ತಿರುವ ಡೆಮಾಕ್ರಸಿ ಸಮ ಸಮಾಜದ ಆಶೋತ್ತರಗಳಿಗೆ ತಿಲಾಂಜಲಿಯಿತ್ತಿರುವ ಪ್ರಭುತ್ವಗಳು, ದೇಶದ ಭವಿಷ್ಯವನ್ನು ಪರಕೀಯ ಬಂಡವಾಳಿಗರ ಮರ್ಜಿಗೆ ಒಪ್ಪಿಸುತ್ತಿರುವ ಆಳುವ ವರ್ಗಗಳ ಒಪ್ಪಂದಗಳು, ಹೆಚ್ಚುತ್ತಿರುವ ಅತ್ಯಾಚಾರಗಳು – ಇವೆಲ್ಲ ಪ್ರಭಾವಂತ ಸಮುದಾಯ ಭ್ರಮ ನಿರಸನಗೊಂಡ ಸ್ಥಿತಿಯನ್ನು ಸಂಕೇತಿಸುತ್ತಿರುವಂತಿದೆ. ಈ ಸಮಸ್ಯೆಗಳಿಗೆ ಕಾಡು ಗಳಲ್ಲಿ ಪರಿಹಾರ ಕಂಡುಕೊಳ್ಳುವ ಅಥವಾ ಇನ್ನಾವುದೋ ಪ್ರಕ್ರಿಯೆಯಲ್ಲಿ ತೊಡಗಿ ತಮ್ಮೊಳಗಿನ ಪ್ರತಿಭಟನೆಯ ಕಾವನ್ನು ಶಮನಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮುದಾಯದ ಪಲಾಯನವನ್ನು ಕಾದಂಬರಿ ಖಂಡಿಸುತ್ತದೆ. ಒಟ್ಟಿನಲ್ಲಿ ಭಾರತೀಯ ಪ್ರಜ್ಞಾವಂತ ಸಮುದಾಯ ಎಚ್ಚೆತ್ತುಕೊಳ್ಳಬೇಕಾದ, ನಮ್ಮ ಸುತ್ತಲಿನ ಜಡಸಮುದಾಯಕ್ಕೆ ನಾವೇ ಚುಚ್ಚುವುದ್ದು ನೀಡಬೇಕಾದ ಅನಿವಾರ್ಯತೆಯನ್ನು ಕೃತಿ ಮನಗಾಣಿಸುತ್ತದೆ.

– ರಮೇಶ ಕೋಲಾರ

Related Books