ನೀತಿ ಚಿಂತಾಮಣಿ

Author : ಎಂ.ಎಸ್. ಪುಟ್ಟಣ್ಣ

Pages 190

₹ 95.00




Year of Publication: 2010
Published by: ವಸಂತ ಪ್ರಕಾಶನ,
Address: # 360, 10ನೇ ಮುಖ್ಯ, ಬಿ-ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 080 2244 3996

Synopsys

ಹಿರಿಯ ಬರಹಗಾರ, ಸಾಹಿತಿ ಎಂ.ಎಸ್. ಪುಟ್ಟಣ್ಣನವರ ಕೃತಿನೀತಿ ಚಿಂತಾಮಣಿ. ಮಕ್ಕಳು ಮುಗ್ದರು. ನಂತರ ಬೆಳೆಯುತ್ತಾ ಸುತ್ತಲ ಪರಿಸರದ ಪರಿಣಾಮ ಅವರ ಮನಸ್ಸು ಕಲುಷಿತಗೊಳ್ಳುತ್ತಾ ಹೋಗುತ್ತದೆ. ಉತ್ತಮ ಸಂಸ್ಕಾರ ಇದ್ದರೆ ಮಕ್ಕಳು ಉತ್ತಮ ಸಂಸ್ಕೃತಿ ಪಡೆಯುತ್ತಾರೆ. ಮನಸ್ಸು ಒಳಿತು ಕೆಡುಕು, ಪ್ರೀತಿ ದ್ವೇಷ, ನೋವು ನಲಿವು, ನೀತಿ ಅನೀತಿ ಮುಂತಾದವುಗಳಲ್ಲಿ ವ್ಯತ್ಯಾಸ ಕಾಣದೆ ಪರಿಶುಭ್ರವಾಗಿರುತ್ತದೆ. ಹೀಗೆ ಪರಿಶುಭ್ರವಾಗಿರುವಾಗ ಜೀವನದ ಉನ್ನತ ಮೌಲ್ಯಗಳನ್ನು ಮನಗಾಣಿಸಿಕೊಡಬಲ್ಲ ಕತೆಗಳನ್ನು ಹೇಳಿದರೆ ಆ ಕತೆಗಳ ಒಟ್ಟು ಆಶಯ ಅವರ ಮನಸ್ಸಿನಲ್ಲಿ ಸ್ಥಿರವಾಗಿ ಬೇರೂರುತ್ತದೆ. ಅವರು ಮೌಲ್ಯಗಳನ್ನು ಕಡೆಗಣಿಸದೆ ಸನ್ಮಾರ್ಗದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಕ್ಕಳಿಗೆ ಕಥಾರೂಪದಲ್ಲಿ ಮೌಲ್ಯಗಳನ್ನು ತಿಳಿಸಿಕೊಡುವ, ನೀತಿಯನ್ನು ಬೋಧಿಸುವ ಕೆಲವೇ ಕೃತಿಗಳಲ್ಲಿ ನೀತಿಚಿಂತಾಮಣಿಯೂ ಒಂದು.

ಸುಮಾರು 125 ವರ್ಷಗಳಷ್ಟು ಹಿಂದೆ ಅವರು ಮಕ್ಕಳಿಗೆಂದೇ ಪುರಾಣೇತಿಹಾಸಗಳ ಕತೆಗಳನ್ನು ಪುನರ್ರಚಿಸಿ ಸಿದ್ಧಪಡಿಸಿದ ಅಮೂಲ್ಯ ಕೃತಿಯೇ ನೀತಿಚಿಂತಾಮಣಿ (೧೮೮೪) 160ಕ್ಕೂ ಹೆಚ್ಚು ಕತೆಗಳಿರುವ ಈ ಪುಸ್ತಕದ ಭಾಷೆ ಮತ್ತು ಶೈಲಿ ಇಂದು ಸ್ವಲ್ಪಮಟ್ಟಿಗೆ ಹಳತೆನ್ನಿಸುವುದು ಸಹಜ. ಆದ್ದರಿಂದ ಈ ಪುಸ್ತಕದ ಭಾಷೆಯನ್ನು ಇವತ್ತಿನ ಕನ್ನಡಕ್ಕೆ ತಕ್ಕಂತೆ ಪರಿವರ್ತಿಸಿ ಪರಿಷ್ಕರಿಸಬೇಕೆಂದು ನಮ್ಮ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟರು. ಈಗ ನಮ್ಮ ಕೋರಿಕೆಯಂತೆ ಪ್ರಸಿದ್ಧ ಕತೆಗಾರ ಎಸ್ ದಿವಾಕರ್ ಈ ಪುಸ್ತಕವನ್ನು ಸೊಗಸಾಗಿ ಪರಿಷ್ಕರಿಸಿದ್ದಾರೆ.

About the Author

ಎಂ.ಎಸ್. ಪುಟ್ಟಣ್ಣ
(21 November 1854 - 11 April 1930)

ಕಥೆಗಾರ, ಕಾದಂಬರಿಕಾರ ಎಂ. ಎಸ್‌. ಪುಟ್ಟಣ್ಣನವರ ಗದ್ಯಸಾಧನೆ ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೋಧನೆ, ಪಠ್ಯ ರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು ಅವರ ಚಲನಶೀಲ ಸಾಹಿತ್ಯ ಕೃಷಿಗೆ ಸಾಕ್ಷಿ.  ಹೊಸಗನ್ನಡ ಗದ್ಯವನ್ನು ಮುನ್ನೆಲೆಗೆ ಯಶಸ್ವಿಯಾಗಿ ಶ್ರಮಿಸಿದವರಲ್ಲಿ ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದಾರೆ.  ಕನ್ನಡದ ನುಡಿಗಟ್ಟಿನಿಂದ ಶ್ರೀಮಂತವಾದ ಶೈಲಿಯಲ್ಲಿ ಮೂಡಿದ ಅವರ ಕಾದಂಬರಿಗಳಾದ ‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಗ ತೆಗೆಯೇ ಮಾಯಾಂಗನೆ’ ಹಾಗೂ ‘ಅವರಿಲ್ಲದೂಟ’ ಕಾದಂಬರಿಗಳು ಪುಟ್ಟಣ್ಣನವರ ಸಾಹಿತ್ಯಕ ಸಿದ್ಧಿಯ ಅತ್ಯುತ್ತಮ ಉದಾಹರಣೆಗಳು. ಆ ಕಾಲದ ಸಾಮಾಜಿಕ ಹಾಗೂ ಜನಪದ ವಿಚಾರಗಳು ಬೆರಗುಗೊಳಿಸುವಂತೆ ಚಿತ್ರಿಸಿದ್ದಾರೆ ಪುಟ್ಟಣ್ಣ. ಅಂದಿನ ...

READ MORE

Related Books