ನೀವು ಕಲಾವಿದರಾಗಬೇಕೆ?

Author : ಬಾಗೂರು ಮಾರ್ಕಾಂಡೇಯ

Pages 160

₹ 150.00




Year of Publication: 2012
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ ಏಜನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 08040114455

Synopsys

ನೀವು ಕಲಾವಿದರಾಗಬೇಕೆ?-ಲೇಖಕ ಬಾಗೂರು ಮಾರ್ಕಾಂಡೇಯ ಅವರು ಚಿತ್ರಕಲಾ ವಿದ್ಯಾರ್ಥಿಗಳೀಗೆ ಹಾಗೂ ಆಸಕ್ತರಿಗೆ ಆರಂಭಿಕ ಹಂತದಲ್ಲಿ ರೇಖೆಗಳನ್ನು ಹೇಘೆ ಎಳೆಯಬೇಕು ಎಂಬುದತರಿಂದ ಹಿಡಿದು ಚಿತ್ರ ಪೂರ್ಣಗೊಳ್ಳುವವರೆಗಿನ ಅದ್ಭುತ ಪ್ರಕ್ರಿಯೆ ಕುರಿತು ವಿವರಿಸಿದ ಉತ್ತಮ ಶಿಕ್ಷಣ ಪಠ್ಯವಿದು. 

ಹೇಗೆ ಚಿತ್ರರಚಿಸಬೇಕು, ಎಲ್ಲಿಂದ ಆರಂಭಿಸಬೇಕು, ಯಾವ ಹಂತಹಂತವಾಗಿ ಹೇಗೆ ರಚಿಸಿದರೆ ಸುಲಭವಾಗಿ ಚಿತ್ರವನ್ನು ಕಲಿಯಬಹುದು. ಚಿತ್ರದಲ್ಲಿ ಎಷ್ಟು ವಿಷಯಗಳಿವೆ. ಅವುಗಳನ್ನು ಹೇಗೆ ಹೇಗೆ ಅಧ್ಯಯನ ಮಾಡಬಹುದು. ಮತ್ತು ಚಿತ್ರಗಳಿಗೆ ಬಣ್ಣ ತುಂಬುವುದು. ವಿನ್ಯಾಸಗೊಳಿಸುವುದು. ಹೀಗೆ ಆರಂಭಿಕವಾಗಿ ಚಿತ್ರಕಲಿಯುವವರಿಗೆ ಮೂಲಭೂತವಾದ ತತ್ವಗಳನ್ನೂ ಸಹ ಇದರಲ್ಲಿ ಅಳವಡಿಸಿ ಸುಲಭವಾಗಿ ಕಲಿಯಲು ಅನುವು ಮಾಡಿಕೊಡುವುದೇ ಅಲ್ಲದೆ, ವಿಧಾನಗಳನ್ನು ಹಂತಹಂತವಾಗಿ ತಿಳಿಸಿದೆ. ಈ ಪುಸ್ತಕವು ವಿವಿಧ ಭಾಷೆಗಳಲ್ಲೂ ಲಭ್ಯವಿದೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books