ನೆಲದ ಬದುಕು

Author : ಎಚ್.ಜಿ. ಶ್ರೀಧರ

Pages 416

₹ 300.00




Year of Publication: 2009
Published by: ಕರ್ನಾಟಕ ಸಂಘ
Address: ಅನುರಾಗ, ಶ್ರೀ ರಾಧಾಕೃಷ್ಣ ಮಂದಿರ ರಸ್ತೆ, ಪುತ್ತೂರು, ದಕ್ಷಿಣ ಕನ್ನಡ - 574201

Synopsys

‘ನೆಲದ ಬದುಕು’ ಹಿರಿಯ ಲೇಖಕ ಕೆ.ಟಿ. ಗಟ್ಟಿ ಅವರಿಗೆ ಸಲ್ಲಿಸಿದ ಅಭಿನಂದನಾ ಗ್ರಂಥ. ಲೇಖಕ ಎಚ್.ಜಿ. ಶ್ರೀಧರ ಅವರು ಈ ಕೃತಿ ಸಂಪಾದಿಸಿದ್ದಾರೆ. ಅಂತರಂಗದ ಬದುಕು,ಹಾಗೂ ಕೆ.ಟಿ.ಗಟ್ಟಿ ಅವರ ‘ನನಗೆ ಬದುಕು ಬರೆಹ ಬೇರೆ ಬೇರೆ ಅಲ್ಲ’, ‘ಭಾಷೆ ಬೆಳೆಸಲು ಕರೆ ಯಾಕೆ, ಕೂಗು ಯಾಕೆ’ ಲೇಖನ, ಶ್ರೀಮತಿ ಯಶೋದ ಅವರ ‘ನನ್ನ ಅಕ್ಷರಗಳಿಗೆ ಸಿಕ್ಕಿದಷ್ಟು’, ಕೆ.ಟಿ. ಸತ್ಯಜಿತ್ ಅವರ ನನ್ನ ಪಪ್ಪ, ಮಮತಾ ಕೃಷ್ಣಮೂರ್ತಿ ಅವರ ನನ್ನೊಳಗಿನ ಗಟ್ಟಿ ಕುಟುಂಬ, ಕುದ್ಮಾಡಿ ವಿಶ್ವನಾಥ ರೈ ಅವರ ಕೆ.ಟಿ. ಗಟ್ಟಿಯವರ ಗಟ್ಟಿತನ, ರಾಜಾ ಚೆಂಡೂರ್ ಅವರ ಕೆ.ಟಿ. ಗಟ್ಟಿ..ಒಂದು ಅನರ್ಘ್ಯ ವ್ಯಕ್ತಿತ್ವ, ಸೇರಿದಂತೆ ಲೇಖಕ ಕೆ.ಟಿ.ಗಟ್ಟಿ ಅವರ ಕೆಲವು ಮಹತ್ವದ ಬರಹಗಳು ಹಾಗೂ ಸಮಕಾಲೀನ ಸಾಹಿತಿಗಳು ಗಟ್ಟಿ ಅವರ ಕುರಿತಾಗಿ ಬರೆದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.

About the Author

ಎಚ್.ಜಿ. ಶ್ರೀಧರ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...

READ MORE

Related Books