ನೆತ್ತರ ಸೂತಕ

Author : ರಹಮತ್ ತರೀಕೆರೆ

Pages 260

₹ 250.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಕನ್ನಡ ಸಾಹಿತ್ಯಲೋಕಕ್ಕೆ ಹೊಸದಾಗಿರುವ ಕೊಲೆಗಡುಕತನವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲಾಗಿದೆ. ಆನುಭಾವಿಕ ಸಾಧನೆಯ ವಿಶಿಷ್ಟಾನುಭವವನ್ನು ದೈವಿಕದ ಭಾಷೆಯೊಳಗೆ ಒಡೆಯುವ ಕಷ್ಟವನ್ನು ಅಥವಾ ನಡೆಯಲಾಗದ ನುಡಿಯನಾಡುವ ಕಷ್ಟವನ್ನು ಶರಣರು ’ನುಡಿಸೂತಕ’ದ ರೂಪಕದಲ್ಲಿ ಹೇಳಿದರು. ಅದಕ್ಕೆ ಹೋಲಿಸಿದರೆ ನಮ್ಮದು ಬೆತ್ತಲೆ ಸೂತಕದ ಕಾಲ; ಸಹಜವಾಗಿ ಸ್ವತಂತ್ರವಾಗಿ ಆಡಿದ ಮಾತು-ಬರೆದ ಬರೆಹ, ಮೃತ್ಯುರೂಪ ತಾಳಿ ಎರಗುವ ಕಾಲ; ಇಷ್ಟಕ್ಕೇ ಮುಗಿಯಲಿಕ್ಕಿಲ್ಲ ಎಂಬಷ್ಟು ಆತಂಕ ಹುಟ್ಟಿಸಿರುವ ಕಾಲ ಕೂಡ. ಈ ಹಿನ್ನೆಲೆಯಲ್ಲಿ ಸೈದ್ದಾಂತಿಕ ಅತ್ಯಂತ ಪರಿಣಾಮಗಳನ್ನು ಎದುರಿಸಲು ನಾಡು ಸಜ್ಜುಗೊಳಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾಗಿ ಕೊಲೆಗೊಂಡವರು ತಮ್ಮ ಚಿಂತನೆಯ ಮೂಲಕ ಬಿಕ್ಕಟ್ಟನ್ನು ದಿಟ್ಟವಾಗಿ ಎದುರಿಸುದ ಹಾದಿಯನ್ನೂ ಬಿಟ್ಟು ತೆರಳಿದ್ದಾರೆ. ಅದರಲ್ಲಿ ನಡೆಯುತ್ತ, ಅದರ ಪರಿಮಿತಿಗಳನ್ನು ವಿಮರ್ಶಿಸುತ್ತ, ಅವರ ವಾರಸುದಾರಿಕೆ ಪಡೆದುಕೊಳ್ಳುವ ವಿಧಾನವನ್ನು ಒಂದು ಪ್ರಜ್ಞಾವಂತ ಸಮುದಾಯವಾಗಿ ಕಂಡುಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಾಹಿತ್ಯ ಸಂಸ್ಕೃತಿ ಚಳುವಳಿಗಳ ವಿದ್ಯಾರ್ಥಿಯೊಬ್ಬನ ಸ್ಪಂದನೆಗಳಾಗಿ ಇಲ್ಲಿನ ಲೇಖನಗಳಿವೆ, ’ಪ್ರತಿಸಂಸ್ಕೃತಿ','ಕತ್ತಿಯಂಚಿನ ದಾರಿ' 'ಧರ್ಮ ಪರೀಕ್ಷೆ’, ’ಚಿಂತನೆಯ ಹಾಡು', 'ನೇತುಬಿದ್ದ ನವಿಲು'ಗಳ ಬಳಿಕ ಪ್ರಕಟವಾಗುತ್ತಿರುವ ಸಂಕಲನವಿದು.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Conversation

Related Books