ನೀ ಬೆರೆಸಿದ ಭೇದ

Author : ನಾಗೇಂದ್ರ ಮಸೂತಿ

Pages 110

₹ 150.00




Year of Publication: 2015
Published by: ಶ್ರೀ ರೇವಣಸಿದ್ದೇಶ್ಚರ್‌ ಪ್ರಕಾಶನ ಕಲ್ಬುರ್ಗಿ

Synopsys

ಈ ಕೃತಿಯಲ್ಲಿ ಒಟ್ಟು 13 ಲೇಖನಗಳಿವೆ. ಒಳಗಿರುವ ಆತ್ಮಕ್ಕೆ ಯಾವ ಲಿಂಗವಿಲ್ಲ. ಆತ್ಮವೆಂಬುದೊಂದು ಮು‍ಖ್ಯ ವಿನ‍ಃ ಬಾಹ್ಯ ರೂಪಗಳಲ್ಲಿ ಅಲ್ಲ  ಎಂಬುದು ಈ ವಚನದ ಪ್ರಮುಖ ಆಶಯವಾಗಿದೆ. ಶರಣದ ದೃಷ್ಟಿಯಿಂದ ಸೃಷ್ಟಿಗೊಡ ಜೀವಿಗಳಲ್ಲಿ ಜಾತಿ, ಕುಲ , ಲಿಂಗದ ಯಾವುದೇ ಭೇದವಿಲ್ಲ. ಬಸವಣ‍್ಣ ಮತ್ತು ಅ‍ಕ್ಕನಾಗಮ್ಮನ ಭಾಂದವ್ಯನ್ನು ಕೂಡ ಇಲ್ಲಿರುವ ವಚನಗಳು ಕೂಡ ವಿವರಿಸುತ್ತದೆ. ದೇವರ ಪರಿಕಲ್ಪನೆ, ಅಷ್ಟಾವರಣ, ಷಟ್ ಸ್ಥಲಗಳು, ಪಂಚಾಕ್ಷರಿ ಮಂತ್ರ ಇಂತಹ ವಿಷಯಗಳ ಬಗ್ಗೆ ಬರೆದ ಲೇಖನಗಳು ಇಲ್ಲಿ ಗಮನಾರ್ಹವಾಗಿದೆ.

 

About the Author

ನಾಗೇಂದ್ರ ಮಸೂತಿ
(20 June 1964)

ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.  ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್‌ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ. ...

READ MORE

Related Books