ನಿಜಶರಣ ಅಂಬಿಗರ ಚೌಡಯ್ಯ

Author : ನಾಗಪ್ಪ ಟಿ. ಗೋಗಿ

Pages 234

₹ 250.00




Year of Publication: 2012
Published by: ಅಭಿಷೇಕ ಪ್ರಕಾಶನ
Address: ಗೋಗಿಪೇಠ, ತಾ: ಶಹಾಪುರ, ಜಿಲ್ಲೆ; ಯಾದಗಿರಿ-585309

Synopsys

ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರ ಕೃತಿ-ನಿಜಶರಣ ಅಂಬಿಗರ ಚೌಡಯ್ಯ. ಈ ಕೃತಿಯು ಗುಲಬರ್ಗಾ ವಿ.ವಿ.ಗೆ ಸಲ್ಲಿಸಿದ ಅವರ ಸಂಶೋಧನಾ ಮಹಾಪ್ರಬಂಧವೂ ಆಗಿದೆ. 12ನೇ ಶತಮಾನದ ಶರಣರ ಪೈಕಿ ಅಂಬಿಗರ ಚೌಡಯ್ಯನ ವಚನಗಳು ತುಂಬಾ ಕಟುವಾಗಿವೆ. ನೇರ ಹಾಗೂ ನಿಷ್ಠುರವಾಗಿವೆ. ಸಾಹಿತಿ ಡಾ. ಬಸವರಾಜ ಸಬರದ ಅವರು ಕೃತಿಗೆ ಬೆನ್ನುಡಿ ಬರೆದು ‘ಈ ಕೃತಿಯು ಹೊಸ ಶೋಧ ಹಾಗೂ ಶಿಸ್ತಿನ ಅಧ್ಯಯನವನ್ನು ಒಳಗೊಂಡಿದೆ. ಶರಣ ಚೌಡಯ್ಯನವರ ಬದುಕು-ಬಂಡಾಯ-ಅಧ್ಯಾತ್ಮ-ಅನುಭಾವ-ಸ್ವಭಾವಗಳನ್ನು ಕುರಿತು ವಿವರವಾಗಿ ಚರ್ಚಿಸಲಾಗಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ನಾಗಪ್ಪ ಟಿ. ಗೋಗಿ
(27 June 1980)

ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ...

READ MORE

Related Books